ಥಾಣೆ: ಹಳಿ ತಪ್ಪಿದ ಕುರ್ಲಾ-ಅಂಬೇರ್'ನಾಥ್ ರೈಲು, ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಮುಂಬೈನ ಥಾಣೆ ಜಿಲ್ಲೆಯಲ್ಲಿ ಕುರ್ಲಾ-ಅಂಬೇರ್ ನಾಥ್ ರೈಲೊಂದು ಹಳಿ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ...
ಹಳಿ ತಪ್ಪಿದ ಕುರ್ಲಾ-ಅಂಬೇರ್'ನಾಥ್ ರೈಲು
ಹಳಿ ತಪ್ಪಿದ ಕುರ್ಲಾ-ಅಂಬೇರ್'ನಾಥ್ ರೈಲು
Updated on

ಮುಂಬೈ: ಮುಂಬೈನ ಥಾಣೆ ಜಿಲ್ಲೆಯಲ್ಲಿ ಕುರ್ಲಾ-ಅಂಬೇರ್ ನಾಥ್ ರೈಲೊಂದು ಹಳಿ ತಪ್ಪಿದ್ದು, ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

ಥಾಣೆಯ ಕಲ್ಯಾಣ್ ಮತ್ತು ವಿತ್ತಲ್ವಾಡಿ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ 5.23 ಸುಮಾರಿಗೆ ಘಟನೆ ನಡೆಸಿದ್ದು, ಕರ್ಲಾ-ಅಂಬೇರ್ ನಾಥ್ ಸ್ಥಳೀಯ ರೈಲಿನ 5 ಬೋಗಿಗಳು ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ರೈಲು ಹಳಿ ತಪ್ಪಿದ್ದರಿಂದಾಗಿ ಕೆಲವೆಡೆ ರೈಲು ಸಂಚಾರದಲ್ಲಿ ವ್ಯತ್ಯಯಗಳು ಉಂಟಾಗಿದ್ದು, ಕಲ್ಯಾಣ್-ಕರ್ಜತ್ ಕಡೆಯಿಂದ ಬರುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿನ್ನೆಯಷ್ಟೇ ಉತ್ತರ ಪ್ರದೇಶದ ಕಾನ್ಪುರದ ಬಳಿ ಅಜ್ಮೆರ್-ಸೀಲ್ದಹ್ ಎಕ್ಸ್ ಪ್ರೆಸ್ ರೈಲೊಂದು ಹಳಿ ತಪ್ಪಿತ್ತು. ಘಟನೆಯಲ್ಲಿ 62 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com