ಉಗ್ರ ಮಸೂದ್ ಮೇಲೆ ನಿಷೇಧ; ವಿಶ್ವಸಂಸ್ಥೆ ಮೇಲೆ ಭಾರತ ಒತ್ತಡ

ಪಠಾಣ್ ಕೋಟ್ ದಾಳಿಯ ಪ್ರಮುಖ ರುವಾರಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮೇಲೆ ನಿಷೇಧ ಹೇರುವಂತೆ ಕೋರಿ ಶೀಘ್ರದಲ್ಲೇ ಭಾರತ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲಿದೆ ಎಂದು ತಿಳಿದುಬಂದಿದೆ...
ಉಗ್ರ ಮಸೂದ್ (ಸಂಗ್ರಹ ಚಿತ್ರ)
ಉಗ್ರ ಮಸೂದ್ (ಸಂಗ್ರಹ ಚಿತ್ರ)
Updated on

ನವದೆಹಲಿ: ಪಠಾಣ್ ಕೋಟ್ ದಾಳಿಯ ಪ್ರಮುಖ ರುವಾರಿಯಾಗಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಮೇಲೆ ನಿಷೇಧ ಹೇರುವಂತೆ ಕೋರಿ ಶೀಘ್ರದಲ್ಲೇ ಭಾರತ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲಿದೆ ಎಂದು ತಿಳಿದುಬಂದಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಪಠಾಣ್ ಕೋಟ್ ದಾಳಿ ಪ್ರಕರಣ ಕುರಿತಂತೆ ಮಸೂದ್ ಅಜರ್ ಮೇಲೆ ನಿಷೇಧ ಹೇರಿಕೆಗಾಗಿ ಭಾರತ ವಿಶ್ವಸಂಸ್ಥೆಯ ನಿಷೇಧ ಸಮಿತಿಯ ಮೊರೆ ಹೋಗುತ್ತಿದೆ. ದಾಳಿ ಸಂಬಂಧ ಈಗಾಗಲೇ ಸಮಿತಿಗೆ ಪಟ್ಟಿಯೊಂದನ್ನು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ಪಟ್ಟಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ ವಿವಿಧ ಉಗ್ರ ಸಂಘಟನೆಗಳ 11 ಭಯೋತ್ಪಾದಕರ ಹೆಸರನ್ನು ಸೂಚಿಸಲಾಗಿದೆ. ದಾಳಿ ಸಂಬಂಧ ಪಾಕಿಸ್ತಾನದ ವಿಶೇಷ ತಂಡ ನಡೆಸುತ್ತಿರುವ ತನಿಖೆಯ ವರದಿಗಾಗಿ ಭಾರತ ಕಾಯುತ್ತಿದ್ದು, ವಿದೇಶಾಂಗ ಕಾರ್ಯದರ್ಶಿಗಳು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದಾರೆ. ಪಾಕಿಸ್ತಾನದ ತನಿಖಾ ವರದಿ ಕೈ ಸೇರಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ವಿಕಾಸ್ ಸ್ವರೂಪ್ ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com