ಡಿಸೆಂಬರ್ ಒಳಗೆ ಬಾಂಗ್ಲಾ ಗಡಿಯಲ್ಲಿ ಸಂಪೂರ್ಣ ಬೇಲಿ: ರಾಜನಾಥ್

ಬಾಂಗ್ಲಾ ವಿರೋಧಿ ಭಾವನೆಯನ್ನು ಕೆರಳಿಸಿ ೧೪ ಲೋಕಸಭಾ ಕ್ಷೇತ್ರಗಳಲ್ಲಿ ೭ ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಪಕ್ಷ ಈಗ ಅದೇ ವಿಷಯವನ್ನು ಮುಂದು ಮಾಡಿ ವಿಧಾನಸಭಾ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗೌಹಾಟಿ: ಬಾಂಗ್ಲಾ ವಿರೋಧಿ ಭಾವನೆಯನ್ನು ಕೆರಳಿಸಿ ೧೪ ಲೋಕಸಭಾ ಕ್ಷೇತ್ರಗಳಲ್ಲಿ ೭ ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಪಕ್ಷ ಈಗ ಅದೇ ವಿಷಯವನ್ನು ಮುಂದು ಮಾಡಿ ವಿಧಾನಸಭಾ ಚುನಾವಣೆಗಳ ಮೇಲೂ ಕಣ್ಣಿಟ್ಟಿದೆ. ಡಿಸೆಂಬರ್ ಹೊತ್ತಿಗೆ ಭಾರತ ಮತ್ತು ಬಾಂಗ್ಲಾದೇಶದ ಗಡಿಯಲ್ಲಿ ಸಂಪೂರ್ಣವಾಗಿ ಬೇಲಿ ಕಟ್ಟಲಾಗುತ್ತದೆ ಎಂದು ಭಾನುವಾರ ರಾಜನಾಥ್ ಸಿಂಗ್ ಹೇಳಿದ್ದಾರೆ.

"ಗಡಿಯಲ್ಲಿ ಬೇಲಿ ನಿರ್ಮಿಸುವ ಕೆಲವನ್ನು ತ್ವರಿತಗೊಳಿಸಿದ್ದು ಡಿಸೆಂಬರ್ ಒಳಗೆ ಸಂಪುರ್ಣಗೊಳ್ಳಲಿದೆ. ನದಿಗಳಿರುವ ಸ್ಥಳಗಳಲ್ಲಿ ಈ ಕೆಲಸಕ್ಕೆ ತುಸು ಅಡ್ಡಿಯಾಗಿದ್ದು ಇದಕ್ಕೆ ಬೇಗನೆ ಪರಿಹಾರ ಕಂಡುಹಿಡಿಯಲಿದ್ದೇವೆ" ಎಂದು ದಕ್ಷಿಣ ಅಸ್ಸಾಮಿನ ಕರೀಂಗಂಜ್ ಜಿಲ್ಲೆಯ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಹೇಳಿದ್ದಾರೆ.

ಸೋಮವಾರ ಧುರ್ಬಿ ಜಿಲ್ಲೆಯ ಹೆಚ್ಚಿನ ಗಡಿಪ್ರದೇಶಗಳಿಗೆ ಭೇಟಿ ನೀಡಲಿರುವ ರಾಜನಾಥ್ ಅವರ ಜೊತೆ ರಾಜ್ಯದ ಬಿಜೆಪಿ ಮುಖಂಡರು ಕೂಡ ಜೊತೆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com