ಉತ್ತರ ಪ್ರದೇಶ: ಕೇವಲ ಹದಿನೈದು ರೂಪಾಯಿ ಹಣಕ್ಕಾಗಿ ದಲಿತ ದಂಪತಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಮೈನ್ ಪುರಿಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ದಂಪತಿ ಕಿರಾಣಿ ಅಂಗಡಿಯಲ್ಲಿ ಸಾಮಾನು ತರಲು ಹೋಗಿದ್ದರು. ಈ ವೇಳೆ ಅಂಗಡಿಯಾತ ಅಶೋಕ್ ಮಿಶ್ರಾ ಎಂಬಾತ ದಂಪತಿ 15 ರು. ಹಳೇ ಬಾಕಿ ನೀಡಬೇಕೆಂದು ಹೇಳಿದ್ದಾನೆ.
ಈ ವಿಚಾರಕ್ಕೆ ವಾಗ್ವಾದ ಆರಂಭವಾಗಿದೆ. ಕುಪಿತಗೊಂಡ ಅಶೋಕ್ ಮಿಶ್ರಾ ಕೊಡಲಿಯಿಂದ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆ.ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಅಶೋಕ್ ಮಿಶ್ರಾ ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement