ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹವಣಿಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ, ಡಿ-ಕಂಪನಿ ಕೋಮುಗಲಭೆ ಸೃಷ್ಟಿಸಿ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡುವುದಕ್ಕೆ ಒಡ್ಡಿದ ಆಮಿಷಗಳೂ ಬಹಿರಂಗವಾಗತೊಡಗಿದೆ.
ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಿ ಕೋಮುಗಲಭೆ ಸೃಷ್ಟಿ ಮಾಡುವುದಕ್ಕಾಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದವರಿಗೆ ದಕ್ಷಿಣ ಆಫ್ರಿಕಾದಲ್ಲಿ ಹಣ ಹಾಗೂ ಉತ್ತಮ ನೌಕರಿ ಕೊಡಿಸುವುದಾಗಿ ಡಿ ಕಂಪನಿ ಆಮಿಷವೊಡ್ಡುತ್ತಿತ್ತು ಎಂದು ಅಹಮದಾಬಾದ್ ಕೋರ್ಟ್ ಗೆ ಎನ್ ಐಎ ಸಲ್ಲಿಸಿರುವ ವರದಿಯಲ್ಲಿ ಹೇಳಿರುವ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.
ಕೋಮು ಗಲಭೆ ಸೃಷ್ಟಿಸಲೆಂದೇ ನೇಮಕವಾದವರಿಗೆ ಭಾರತದಲ್ಲಿ ಪೆಟ್ರೋಲ್ ಬಾಂಬ್ ಗಳನ್ನು ಸ್ಫೋಟಿಸಲು ಹಾಗೂ ಚರ್ಚ್ ಗಳ ಮೇಲೆ ದಾಳಿ ನಡೆಸಲು ಸೂಚನೆ ನೀಡಲಾಗುತ್ತಿತ್ತು ಎಂದು ವರದಿಯ ಮೂಲಕ ತಿಳಿದುಬಂದಿದೆ. ಇನ್ನು ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಲು ಡಿ-ಕಂಪನಿಯ ಪ್ರಮುಖ ಪಾತಕಿಗಳಾದ ಜಾವೆದ್ ಚಿಕ್ನ ಅವರಿಗೆ ನೀಡಲಾಗಿದ್ದ 50 ಲಕ್ಷ ರೂ, ದುಬೈ ನಿಂದ ಹವಾಲ ಮೂಲಕ ಗುಜರಾತ್ ಗೆ ಕಳಿಸಲಾಗಿತ್ತು ಎಂಬುದೂ ಬಹಿರಂಗವಾಗಿದೆ.
Advertisement