ತಿರುವನಂತರಪುರ: ಸಿಆರ್'ಪಿಎಫ್ ಶಿಬಿರದಲ್ಲಿ ನೀಡಲಾಗಿದ್ದ ಆಹಾರವನ್ನು ಸೇವಿಸಿ 400 ಯೋಧರು ಅಸ್ವಸ್ತರಾಗಿರುವ ಘಟನೆಯೊಂದು ಕೇರಳದ ಪಲ್ಲಿಪುರಂನಲ್ಲಿ ಭಾನುವಾರ ನಡೆದಿದೆ.
ವಿಷಯುಕ್ತ ಆಹಾರದಿಂದಾಗಿ ಯೋಧರು ಅಸ್ವಸ್ತರಾಗಿದ್ದಾರೆಂದು ಶಂಕಿಸಲಾಗಿದ್ದು, ಅಸ್ವಸ್ತಗೊಂಡ ಯೋಧರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಯೋಧರಿಗೆ ಆಹಾರವನ್ನು ನೀಡಲಾಗಿದ್ದು, ಆಹಾರ ಸೇವಿಸುತ್ತಿದ್ದಂತೆಯೇ ಯೋಧರಿಗೆ ಹೊಟ್ಟೆನೋವು ಹಾಗೂ ವಾಂತಿಯಾಗಲು ಶುರುವಾಗಿದೆ. ಕೂಡಲೇ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
109 ಯೋಧರನ್ನು ತ್ರಿವಂಡ್ರಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಪರಿವೀಕ್ಷಣೆಯಲ್ಲಿರಿಸಲಾಗಿದೆ. ಈಗಾಗಲೇ ಕೇರಳ ರಾಜ್ಯ ಆರೋಗ್ಯ ಸಚಿವ ಕೆ.ಕೆ. ಶೈಲಜ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದು, ಯೋಧರ ಆರೋಗ್ಯವನ್ನು ವಿಚಾರಿಸಿದ್ದಾರೆ.