ಮೂರು ವರ್ಷಗಳ ಹಿಂದೆ ನಡೆದ ಘಟನೆಗೆ ಜಗದೀಶ್ ಬಂಜಾರ ಎಂಬ ಬಾಲಕನಿಗೆ ಈಗಾಗಲೇ ಶಿಕ್ಷೆಯಾಗಿದೆ. ಅಂದು ಅಲಹಾಬಾದ್ ನ ಗಂಗಾ ನದಿಯಲ್ಲಿ ಸ್ನಾನ ಮಾಡಿ ತನ್ನ ಗ್ರಾಮವಾದ ಭೋಪಾಲ್ ನಿಂದ 225 ಕಿಲೋ ಮೀಟರ್ ದೂರದಲ್ಲಿ ತರ್ಪುರ್ ಗ್ರಾಮದಲ್ಲಿ ಇಡೀ ಸಮುದಾಯಕ್ಕೆ ಸಸ್ಯಾಹಾರ ಊಟವನ್ನು ನೀಡುವಂತೆ ಪಂಚಾಯ್ತಿ ಮುಖ್ಯಸ್ಥ ಆದೇಶ ನೀಡಿದ್ದರು. ಅಲ್ಲದೆ ಜಗದೀಶ್ ಬಂಜಾರ, ಆತನ ಪತ್ನಿ ಗೀತಾ ಬಾಯಿ ಮತ್ತು ಪುತ್ರಿ ಪೂಲ್ ಬಾಯಿಯನ್ನು ಗ್ರಾಮದಿಂದ ಬಹಿಷ್ಕರಿಸಲಾಗಿತ್ತು. ಗ್ರಾಮದ ಬಾವಿಯಿಂದ ನೀರು ಸೇದುವುದಕ್ಕೆ ಕೂಡ ಬಹಿಷ್ಕಾರ ಹಾಕಲಾಗಿತ್ತು.