ದೇಶದಲ್ಲಿ ಬಿಜೆಪಿಯಿಂದ ಒಡಕುಂಟು ರಾಜಕೀಯ: ಮಮತಾ ವಾಗ್ದಾಳಿ

ದೇಶದಲ್ಲಿ ಬಿಜೆಪಿ ಒಡುಕುಂಟು ಮಾಡುವ ರಾಜಕೀಯವನ್ನು ಮಾಡುತ್ತಿದ್ದು, ಬಿಜೆಪಿ ವಿರುದ್ಧ ಸ್ಥಳೀಯ ಪಕ್ಷಗಳಉ ಕೈಜೋಡಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಹೇಳಿದ್ದಾರೆ...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಭುವನೇಶ್ವರ: ದೇಶದಲ್ಲಿ ಬಿಜೆಪಿ ಒಡುಕುಂಟು ಮಾಡುವ ರಾಜಕೀಯವನ್ನು ಮಾಡುತ್ತಿದ್ದು, ಬಿಜೆಪಿ ವಿರುದ್ಧ ಸ್ಥಳೀಯ ಪಕ್ಷಗಳಉ ಕೈಜೋಡಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಹೇಳಿದ್ದಾರೆ. 
ಮೂರು ದಿನಗಳ ಕಾಲ ಭುವನೇಶ್ವರಕ್ಕೆ ಭೇಟಿ ನೀಡಿರುವ ಅವರು, ಶೀಘ್ರದಲ್ಲಿಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ. 
ಪೂರಿ ಜಗನ್ನಾಥ ದೇಗುಲದಲ್ಲಿ ನಡೆದ ಘಟನೆ ಹಾಗೂ ಗೋಮಾಂಸ ಸೇವನೆ ಕುರಿತಂತೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸಾಕಷ್ಟು ಪ್ರತಿಭಟನೆಗಳು ಹಾಗೂ ವಿರೋಧಗಳನ್ನು ಮಮತಾ ಬ್ಯಾನರ್ಜಿಯವರು ಎದುರಿಸುತ್ತಿದ್ದು, ಪ್ರತಿಭಟನೆಗಳು ಹಾಗೂ ವಿರೋಧದ ನಡೆವೆಯೂ ದೇಗುಲಕ್ಕೆ ಇಂದು ಭೇಟಿ ನೀಡಲಿದ್ದಾರೆ. ಮಮತಾ ಭೇಟಿ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 
ಪೂರಿಯಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ, ಹಿಂದೂ ಮತ್ತು ಜಾತ್ಯಾತೀತ ಮೌಲ್ಯಗಳ ಮೇಲೆ ನಾನು ಸಾಕಷ್ಟು ನಂಬಿಕೆಯನ್ನು ಇಟ್ಟಿದ್ದೇನೆ. ನಾನು ಕೂಡ ಹಿಂದುತ್ವವನ್ನು ಪಾಲನೆ ಮಾಡುತ್ತೇನೆ. ಆದರೆ, ಧರ್ಮಕ್ಕೆ ಮಸಿ ಬಳೆಯುವ ಇತರರಂತೆ ಕೆಲಸಗಳನ್ನು ನಾನು ಮಾಡುವುದಿಲ್ಲ. ರಾಷ್ಟ್ರೀಯ ಪಕ್ಷ ಬಿಜೆಪಿ ಧರ್ಮದ ಆಧಾರದಲ್ಲಿ ದೇಶದಲ್ಲಿ ಒಡಕುಂಟು ಮಾಡುವ ರಾಜಕೀಯ ಆಟವನ್ನು ಆಡುತ್ತಿದೆ ಎಂದು ಹೇಳಿದ್ದಾರೆ. 
ಬಿಜೆಪಿ ವಿರುದ್ಧ ಸ್ಥಳೀಯ ಪಕ್ಷಗಳು ಸಿಡಿದೇಳಲು ಇದು ಸಕಾಲವಾಗಿದೆ. ಶೀಘ್ರದಲ್ಲಿಯೇ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡುತ್ತೇನೆಂದು ತಿಳಿಸಿದ್ದಾರೆ. 
ಇದೇ ವೇಳೆ ನಾರದ ಸ್ಟಿಂಗ್ ಆಪರೇಷನ್ ಪ್ರಕರಣ ಕುರಿತಂತೆ 13 ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಸಿಬಿಐ ಅಧಿಕಾರಿಗಳು ನಡೆಸುತ್ತಿರುವ ತನಿಖೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸುವ ಅವರು, ಇದು ಬಿಜೆಪಿಯ ಪಿತೂರಿ. ಪ್ರಕರಣ ಅತ್ಯಂತ ಹಳೆಯಲಾಗಿದ್ದು, ಟಿಎಂಸಿಯನ್ನು ಗುರಿ ಮಾಡಲಾಗುತ್ತಿದೆ. ಕಾನೂನಾತ್ಮಕವಾಗಿಯೇ ನಮ್ಮ ಪಕ್ಷ ಪಿತೂರಿಯ ವಿರುದ್ಧ ಹೋರಾಟ ಮಾಡಲಿದೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com