ಗಡಿ ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ನಾಶಪಡಿಸಲು ಭಾರತ ಕರೆ

ನೂರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಆಫ್ಘನ್ ರಾಷ್ಟ್ರೀಯ ರಕ್ಷಣಾ ಪಡೆಯ ಮೇಲೆ ತಾಲಿಬಾನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೂರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಆಫ್ಘನ್ ರಾಷ್ಟ್ರೀಯ ರಕ್ಷಣಾ ಪಡೆಯ ಮೇಲೆ ತಾಲಿಬಾನ್ ದಾಳಿಯನ್ನು ಬಲವಾಗಿ ಖಂಡಿಸಿರುವ ಭಾರತ, ಗಡಿಯಲ್ಲಿರುವ ಭಯೋತ್ಪಾದಕರ ಸುರಕ್ಷಿತ ತಾಣವನ್ನು ಕೂಡಲೇ ಕೆಡವಿ ಹಾಕಬೇಕೆಂದು ಪ್ರತಿಪಾದಿಸಿದೆ.
ನಿನ್ನೆ ಆಫ್ಘಾನಿಸ್ತಾನದ ಮಝರ್ ಇ ಶರೀಫ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಭಾರತ ಬಲವಾಗಿ ಖಂಡಿಸುತ್ತದೆ. ಭಾರತ ಸರ್ಕಾರ ಮತ್ತು ಇಲ್ಲಿನ ಜನರು ಆಫ್ಘಾನಿಸ್ತಾನದ ಜನರು ಮತ್ತು ಸರ್ಕಾರದ ಬಗ್ಗೆ ತೀವ್ರ ಅನುಕಂಪ ವ್ಯಕ್ತಪಡಿಸುತ್ತದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಭಯೋತ್ಪಾದಕರ ಸುರಕ್ಷಿತ ತಾಣವನ್ನು ತಕ್ಷಣವೇ ಕೆಡವಿ ಹಾಕಬೇಕೆಂಬುದನ್ನು ಈ ದಾಳಿ ಜ್ಞಾಪಿಸುತ್ತದೆ. ಆಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಗೆ ಒಳಗಿನಿಂದ ಮತ್ತು ಗಡಿಯ ಹೊರಗಿನಿಂದ ಬೆಂಬಲ ನೀಡುತ್ತಿರುವವರನ್ನು ತಕ್ಷಣ ನಾಶಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದೆ. 
ಬಲ್ಕ್ ಪ್ರಾಂತ್ಯದಲ್ಲಿರುವ ಆಫ್ಘನ್ ರಾಷ್ಟ್ರೀಯ ಸೇನೆಯ 209 ಶಹೀನ್ ಕಾರ್ಪ್ಸ್ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ಮಸೀದಿಯಲ್ಲಿ ನಿನ್ನೆ ಮಧ್ಯಾಹ್ನ 1.30ರ ಸುಮಾರಿಗೆ ಭಯೋತ್ಪಾದಕ ದಾಳಿ ನಡೆಯಿತು. ಸೇನಾ ವಾಹನದಲ್ಲಿ ಮಿಲಿಟರಿ ಯೂನಿಫಾರ್ಮ್ ಧರಿಸಿ ಬಂದ ಒಳ ನುಸುಳುಕೋರರು ಭದ್ರತೆಯನ್ನು ತೂರಿಕೊಂಡು ಬಂದು ಸಂಘಟಿತ ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com