ಚರ್ಮ ಸುಲಿತೀನಿ: ಪೊಲೀಸ್ ಅಧಿಕಾರಿಗೆ ಬಿಜೆಪಿ ಸಂಸದೆ ಧಮ್ಕಿ

ಕೊಲೆ ಪ್ರಕರಣವೊಂದರ ತನಿಖೆ ಸಂಬಂಧ ತಮ್ಮ ಜೊತೆ ವಾಗ್ವಾದ ನಡೆಸಿದ ಪೊಲೀಸ್ ಅಧಿಕಾರಿಗೆ ನಿನ್ನೆ ಚರ್ಮ ಸುಲಿದು ಹಾಕುತ್ತೀನಿ ಎಂದು ಉತ್ತಪ್ರದೇಶದ ಬಿಜೆಪಿ ಮಹಿಳಾ ಸಂಸದೆಯೊಬ್ಬರು ಎಚ್ಚರಿಕೆ...
ಬಿಜೆಪಿ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್,
ಬಿಜೆಪಿ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್,

ಲಖನೌ: ಕೊಲೆ ಪ್ರಕರಣವೊಂದರ ತನಿಖೆ ಸಂಬಂಧ ತಮ್ಮ ಜೊತೆ ವಾಗ್ವಾದ ನಡೆಸಿದ ಪೊಲೀಸ್ ಅಧಿಕಾರಿಗೆ ನಿನ್ನೆ ಚರ್ಮ ಸುಲಿದು ಹಾಕುತ್ತೀನಿ ಎಂದು ಉತ್ತಪ್ರದೇಶದ ಬಿಜೆಪಿ ಮಹಿಳಾ ಸಂಸದೆಯೊಬ್ಬರು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಬಾರಾಂಬಕಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿರುವ ಜ್ಞಾನೇಂದ್ರ ಸಿಂಗ್ ಗೆ ಕರೆ ಮಾಡಿದ್ದ ಬಿಜೆಪಿ ಸಂಸದೆ ಪ್ರಿಯಾಂಕಾ ಸಿಂಗ್ ರಾವತ್, ಕೊಲೆ ಪ್ರಕರಣದ ತನಿಖೆ ಬಗ್ಗೆ ಪ್ರಶ್ನಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ನಾನು ಪೊಲೀಸ್, ನಾನೇನು ಮಾಡುತ್ತಿದ್ದೇನೆಂಬುದು ನನಗೆ ಗೊತ್ತು ಎಂದು ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.

ಈ ವೇಳೆ ಸಿಟ್ಟಿಗೆದ್ದ ಬಿಜೆಪಿ ಸಂಸದೆ, ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶ ರಾಜ್ಯದಲ್ಲಿ ಯೋಗಿ ಆದಿತ್ಯಾನಾಥ್ ಸರ್ಕಾರವಿದೆ. ಇನ್ನು ನಿಮ್ಮ ಆಟ ನಡೆಯೋಲ್ಲ. ಸರಿಯಾಗಿ ಕೆಲಸ ಮಾಡಿ. ಇಲ್ಲವೇ ಜೀವನಂತ ನಿಮ್ಮ ಚರ್ಮ ಸುಲಿದು ಹಾಕುತ್ತೇನೆಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com