ಡ್ರಗ್ಸ್ ಮಾಫಿಯಾ ಪ್ರಕರಣ ಸಂಬಂಧ ಸುದ್ದಿಗಾರಿರೊಂದಿಗೆ ಮಾತನಾಡಿರುವ ಕೆಸಿಆರ್ ಅವರು, ಮಾದಕ ವ್ಯಸನಿಗಳ ವಿರುದ್ಧ ಯಾವ ಪ್ರಕರಣಗಳನ್ನೂ ದಾಖಲಿಸುವುದಿಲ್ಲ. ಬದಲಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಕ್ರಿಮಿನಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಪ್ರಕರಣದಲ್ಲಿ ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎಂದಿದ್ದಾರೆ.
ಚಿತ್ರರಂಗವನ್ನು ಸರ್ಕಾರದ ಗುರಿಯಾಗಿಸುತ್ತಿದೆ ಎಂಬ ಪ್ರಶ್ನೆಗಳೇ ಬರುವದಿಲ್ಲ. ಪ್ರಕಱಣ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಮಾದಕ ವಸ್ತುಗಳನ್ನು ಸ್ಪೇನ್, ಥೈಲಾಂಡ್, ಪೋರ್ಚುಗಲ್, ನೈಜೀರಿಯಾ, ನೆದರ್ ಲ್ಯಾಂಡ್ ಗಳಿಂದ ಕಳ್ಳಸಾಗಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಮಾದಕವಸ್ತುಗಳು ಕಳ್ಳಸಾಗಣೆಯಾಗಲು ಸರ್ಕಾರ ಬಿಡುವುದಿಲ್ಲ. ಮೂಲದಲ್ಲೇ ಮಾದಕವಸ್ತುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.