ಕಾರು ಅಪಘಾತ: ರಾಜಸ್ತಾನ ಸಚಿವರಿಗೆ ಗಂಭೀರ ಗಾಯ, ಸಹಾಯಕ ಸಾವು

ರಾಜಸ್ತಾನದ ಕೋಟಾ ದಲ್ಲಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ರಾಜಸ್ತಾನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಾಬೂ ಲಾಲ್ ವರ್ಮಾ ಅವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಸೋಮವಾರ ತಡರಾತ್ರಿ...
ಕಾರು ಅಪಘಾತ: ರಾಜಸ್ತಾನ ಸಚಿವರಿಗೆ ಗಂಭೀರ ಗಾಯ, ಸಹಾಯಕ ಸಾವು
ಕಾರು ಅಪಘಾತ: ರಾಜಸ್ತಾನ ಸಚಿವರಿಗೆ ಗಂಭೀರ ಗಾಯ, ಸಹಾಯಕ ಸಾವು
ಕೋಟಾ (ರಾಜಸ್ತಾನ): ರಾಜಸ್ತಾನದ ಕೋಟಾ ದಲ್ಲಿ ಕಾರು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ರಾಜಸ್ತಾನ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಬಾಬೂ ಲಾಲ್ ವರ್ಮಾ ಅವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. 
ರಾಜಸ್ತಾನದ ರಾಷ್ಟ್ರೀಯ ಹೆದ್ದಾರಿ 76ರಲ್ಲಿ ತಡರಾತ್ರಿ 1 ಗಂಟೆ ಸುಮಾರಿಗೆ ಸಚಿವರ ಬಾಬು ಲಾಲ್ ಅವರ ಕಾರು ಹೋಗುತ್ತಿತ್ತು. ಈ ವೇಳೆ ಎಮ್ಮೆಯೊಂದು ಅಡ್ಡ ಬಂದಿದೆ. ಎಮ್ಮೆಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಹೋಗಿದ್ದಾನೆ. ಈ ವೇಳೆ ಅಪಘಾತ ಸಂಭವಿಸಿದೆ. 
ಪರಿಣಾಮ ಕಾರಿನಲ್ಲಿದ್ದ ಸಚಿವ ಬಾಬು ಲಾಲ್ ವರ್ಮಾ ಹಾಗೂ ಸಹಾಯಕ ಮೋತಿ ಲಾಲ್ ಅವರಿಗೆ ಗಂಭೀರವಾಗಿ ಗಾಯವಾಗಿದೆ. ಕೂಡಲೇ ಇಬ್ಬರನ್ನೂ ಎಂಬಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಇದೀಗ ಮೋತಿ ಲಾಲ್ ಅವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಬಾಬು ಲಾಲ್ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com