ಭೂಮಿ ಕುರಿತು ವಾಗ್ವಾದ: ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ ಕಾಂಗ್ರೆಸ್ ಶಾಸಕ

ಭೂ ಜಾಗ ಕುರಿತಂತೆ ರೈತ ಹಾಗೂ ಕಾಂಗ್ರೆಸ್ ಶಾಸಕನ ನಡುವೆ ವಾಗ್ವಾದ ನಡೆದಿದ್ದು, ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ರೈತನೊಬ್ಬನಿಗೆ ಶಾಸಕ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಇದಾಗ ಸಾಮಾಜಿಕ ಜಾಲತಾಣಗಳಲ್ಲಿ...
ಭೂಮಿ ಕುರಿತು ವಾಗ್ವಾದ: ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ ಕಾಂಗ್ರೆಸ್ ಶಾಸಕ
ಭೂಮಿ ಕುರಿತು ವಾಗ್ವಾದ: ರೈತನಿಗೆ ಹಿಗ್ಗಾಮುಗ್ಗಾ ಥಳಿಸಿದ ಕಾಂಗ್ರೆಸ್ ಶಾಸಕ
ಔರಂಗಾಬಾದ್: ಭೂ ಜಾಗ ಕುರಿತಂತೆ ರೈತ ಹಾಗೂ ಕಾಂಗ್ರೆಸ್ ಶಾಸಕನ ನಡುವೆ ವಾಗ್ವಾದ ನಡೆದಿದ್ದು, ತನ್ನ ಬೆಂಬಲಿಗರೊಂದಿಗೆ ಸೇರಿಕೊಂಡು ರೈತನೊಬ್ಬನಿಗೆ ಶಾಸಕ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಇದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಅಬ್ದುಲ್ ಸತ್ತಾರ್ ನಬಿ ಎಂಬುವವರೇ ರೈತನಿಗೆ ಥಳಿಸಿರುವ ಶಾಸಕನಾಗಿದ್ದು, ವಿಡಿಯೋ ಕುರಿತಂತೆ ಸಾಕಷ್ಟು ಟೀಕೆ ಹಾಗೂ ವಿರೋಧಗಳು ವ್ಯಕ್ತವಾಗತೊಡಗಿವೆ. 
ರೈತನಿಗೆ ಥಳಿಸಿರುವ ಕ್ರಮವನ್ನು ಶಾಸಕ ಸಮರ್ಥಿಸಿಕೊಂಡಿದ್ದಾರೆ. ಭೂಮಿ ದಲಿತ ಸಹೋದರನಿಗೆ ಸೇರಿದ್ದಾಗಿತ್ತು. ನನಗೂ ಈ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ, ಆ ಪರಿಸ್ಥಿತಿ ಹಾಗಿತ್ತು. ಹೀಗಾಗಿ ನಾನು ರೈತನಿಗೆ ಹೊಡೆಯಬೇಕಾಗಿ ಬಂತು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com