ಪಾಕ್ ಪರ ಘೋಷಣೆ ಕೂಗುವವರು, ಪಾಕಿಸ್ತಾನಕ್ಕೆ ಹೋಗಲಿ: ಮಿರ್ವಾಜ್'ಗೆ ಆರ್'ಎಸ್ಎಸ್

ಚಾಂಪಿಯನ್ಸ್ ಟ್ರೋಪಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಗೆಲವು ಸಾಧಿಸುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಸಂಭ್ರಮಾಚರಣೆ ಮಾಡಿರುವುದಕ್ಕೆ ಆರ್'ಎಸ್ಎಸ್ ತೀವ್ರವಾಗಿ...
ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಮತ್ತು ಪ್ರತ್ಯೇಕತಾವಾದಿ ನಾಯಕ ಮಿರ್ವಾಜಾ ಉಮರ್ ಫಾರೂಕ್
ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಮತ್ತು ಪ್ರತ್ಯೇಕತಾವಾದಿ ನಾಯಕ ಮಿರ್ವಾಜಾ ಉಮರ್ ಫಾರೂಕ್
ಅಯೋಧ್ಯೆ: ಚಾಂಪಿಯನ್ಸ್ ಟ್ರೋಪಿ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಗೆಲವು ಸಾಧಿಸುತ್ತಿದ್ದಂತೆಯೇ ಕಾಶ್ಮೀರದಲ್ಲಿನ ಪ್ರತ್ಯೇಕತಾವಾದಿಗಳು ಸಂಭ್ರಮಾಚರಣೆ ಮಾಡಿರುವುದಕ್ಕೆ ಆರ್'ಎಸ್ಎಸ್ ತೀವ್ರವಾಗಿ ಕಿಡಿಕಾರಿದೆ. 
ಪಾಕಿಸ್ತಾನ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತ್ಯೇಕತಾವಾದಿ ನಾಯಕ ಮಿರ್ವಾಜಾ ಉಮರ್ ಫಾರೂಕ್ ಶುಭಾಶಯ ಕೋರಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರ್'ಎಸ್ಎಸ್ ನಾಯಕ ಇಂದ್ರೇಶ್ ಕುಮಾರ್ ಅವರು, ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಘೋಷಣೆ ಕೂಗುವವರು, ಅಭಿನಂದಿಸುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಹೇಳಿದ್ದಾರೆ. 
ಮಿರ್ವಾಜಾ ಉಮರ್ ಅವರು ಕಾಶ್ಮೀರದಲ್ಲಿರುವ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಅವರು ಶುಭಾಶಯ ಕೋರಿದ್ದಾರೆ. ಇಂತಹ ಚಟುವಟಿಕೆಗಳು ನಡೆಸುವವರು ರಾಷ್ಟ್ರೀಯವಾದಿಗಳಾಗುವುದಿಲ್ಲ. ಇಸ್ಲಾಮಿಸ್ಟ್ ಗಳಾಗುತ್ತಾರೆ. ದೇಹ ಇಲ್ಲಿಯೇ ಇದ್ದರೂ ಅವರ ಆತ್ಮಗಳು ಪಾಕಿಸ್ತಾನದಲ್ಲಿರುತ್ತವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com