ಸಂಗ್ರಹ ಚಿತ್ರ
ದೇಶ
ಯಾವುದೇ ಪರಿಸ್ಥಿತಿ ಎದುರಿಸಲು ಸೇನೆ ಸಿದ್ಧವಾಗಿದೆ; ಬಿಎಸ್ಎಫ್
ಭಾರತದ ಗಡಿಗೆ ನುಗ್ಗಿ ಇಬ್ಬರು ಯೋಧರನ್ನು ಪಾಕಿಸ್ತಾನ ಬ್ಯಾಟ್ ಪಡೆ ಬಲಿ ತೆಗೆದುಕೊಂಡಿರುವ ಬೆನ್ನಲ್ಲೇ ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ...
ನವದೆಹಲಿ: ಭಾರತದ ಗಡಿಗೆ ನುಗ್ಗಿ ಇಬ್ಬರು ಯೋಧರನ್ನು ಪಾಕಿಸ್ತಾನ ಬ್ಯಾಟ್ ಪಡೆ ಬಲಿ ತೆಗೆದುಕೊಂಡಿರುವ ಬೆನ್ನಲ್ಲೇ ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು ಗಡಿ ಭದ್ರತಾ ಪಡೆ ಶುಕ್ರವಾರ ಹೇಳಿದೆ.
ದಾಳಇ ಕುರಿತಂತೆ ಮಾತನಾಡಿರುವ ಬಿಎಸ್ಎಫ್ ಡಿಜಿ ಕೆ. ಕೆ. ಶರ್ಮಾ ಅವರು, ಗಡಿ ನಿಯಂತ್ರಣ ರೇಖೆಯಲ್ಲಿ ಯೋಧರು ಕಾರ್ಯಪ್ರವೃತ್ತರಾಗಿದ್ದಾರೆ. ಪ್ರತೀನಿತ್ಯ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇದ್ದು, ನಮ್ಮ ಯೋಧರು ಯಾವುದೇ ಪರಿಸ್ಥಿತಿ ಎದುರಿಸಲು ಸದಾಕಾಲ ಸಿದ್ಧರಿರುತ್ತಾರೆಂದು ಹೇಳಿದ್ದಾರೆ.
ನಿನ್ನೆಯಷ್ಟೇ ಗಡಿಯಲ್ಲಿ ಪೈಶಾಚಿಕ ಕೃತ್ಯವೆಸಗಿದ್ದ ಪಾಕಿಸ್ತಾನ ಬಾರ್ಡರ್ ಆ್ಯಕ್ಷ್ ಟೀಮ್ (ಬ್ಯಾಟ್) ಗಡಿಯಿಂದ 600 ಮೀಟರ್ ಒಳನುಸುಳಿ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ