ಕೇಜ್ರಿವಾಲ್ ಅವರ ಆರೋಪ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಆರ್.ಪಿ. ಸಿಂಗ್ ಅವರು, ಕೇಜ್ರಿವಾಲ್ ಅವರು ಮಾತಿಗೆ ನಿಲ್ಲುವಂತಹ ವ್ಯಕ್ತಿಯಲ್ಲ. ಸ್ವತಃ ತಮ್ಮ 'ಗುರು' ಅಣ್ಣಾ ಹಜಾರೆಯವರ ಮಾತನ್ನೇ ಅವರು ಕೇಳುತ್ತಿಲ್ಲ. ಅಣ್ಣಾ ಹಜಾರೆಯವರ ಹೇಳಿಕೆ ಸರಿಯಾಗಿದೆ. ದೊಡ್ಡ ರೀತಿಯಲ್ಲಿ ತಂತ್ರಜ್ಞಾನದ ಪ್ರಗತಿಯಾಗುತ್ತಿರುವ ಸಮಯದಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಗಳನ್ನೇ ಬಳಸಬೇಕು. ಸಮಯ ಹಾಗೂ ಹಣವನ್ನೇಕೆ ವ್ಯರ್ಥಮಾಡಬೇಕೆಂದು ಹೇಳಿದ್ದಾರೆ.