ಅಮ್ಜಾದ್ ಖಾನ್ ರಾಜಸ್ಥಾನ ಚುರು ನ ನಿವಾಸಿಯಾಗಿದ್ದು, ಜುನದ್-ಉಲ್-ಖಿಲಾಫಫಿಲ್-ಹಿಂದ್ (ಜೆಕೆಹೆಚ್) ಎಂಬ ಇಸೀಸ್ ಉಗ್ರ ಸಂಘಟನೆಯ ಭಾಗವಾಗಿರುವ ಉಗ್ರ ಸಂಘಟನೆಗೆ ಭಾರತದ ಯುವಕರನ್ನು ಸೇರಿಸುತ್ತಿದ್ದ. ಜೆಕೆಹೆಚ್ ಗೆ ಶಫಿ ಅರ್ಮಾರ್ ಎಂಬ ವ್ಯಕ್ತಿ ಮುಖ್ಯಸ್ಥನಾಗಿದ್ದು, 2015-16 ರಲ್ಲಿ ಪ್ರಾರಂಭವಾದ ಸಂಘಟನೆಯ 30 ಸದಸ್ಯರನ್ನು ಕಳೆದ ವರ್ಷ ಎನ್ಐಎ ಬಂಧಿಸಿತ್ತು. ಅಷ್ಟೇ ಅಲ್ಲದೇ ಸೌದಿಯಲ್ಲಿದ್ದುಕೊಂಡು ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದ್ದ ಅಮ್ಜಾದ್ ಖಾನ್ ಅಲಿಯಾಸ್ ಆಯನ್ ಖಾನ್ ನ್ನು ಸೌದಿ ಗಡಿಪಾರು ಮಾಡಿತ್ತು.