ಪಟ್ನಾ: ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಪತ್ನಿ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಹಾರದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಕತ್ತು ಸೀಳಲು, ಕೈಗಳನ್ನು ಕಡಿಯಲು ಸಿದ್ದರಿದ್ದಾರೆ ಎಂದಿದ್ದಾರೆ.
ನಿನ್ನೆ ಬಿಹಾರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ರಾಬ್ಡಿ ದೇವಿ ಈ ಹೇಳಿಕೆ ನೀಡಿದ್ದಾರೆ. ಬಿಹಾರದ ಬಿಜೆಪಿ ಪಕ್ಷದ ಅಧ್ಯಕ್ಷರಾದ ನಿತ್ಯಾನಂದ ರಾಯ್ 'ಪ್ರಧಾನಿ ಅವರ ವಿರುದ್ಧ ಕೈ ಎತ್ತುವವರ ಎಲ್ಲಾ ಕೈ ಬೆರಳನ್ನೂ ಕತ್ತರಿಸಬೇಕು' ಎಂದು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದರು
ಆ ನಂತರದಲ್ಲಿ ರಾಯ್ ತಮ್ಮ ಹೇಳಿಕೆ ಕುರಿತಂತೆ ಕ್ಷಮೆ ಯಾಚಿಸಿದ್ದರು. ಬಿಹಾರದ ಜನತೆಯ ಭಾವನೆಗೆ ಧಕ್ಕೆಯಾಗುವಂತಿದ್ದರೆ ನನ್ನ ಹೇಳಿಕೆಯ ಕುರಿತು ಕ್ಷಮೆಯಾಚಿಸುವೆ ಎಂದಿದ್ದ ಅವರ ಮಾತುಗಳಿಗೆ ತಿರುಗೇಟು ನೀಡುವಂತೆ ರಾಬ್ಡಿ ದೇವಿ ಈ ಹೇಳಿಕೆ ನೀಡಿದ್ದಾರೆ.