ಇದೇ ವೇಳೆ ಭಾರತ-ಚೀನಾ ಶೀತಲ ಸಮರಕ್ಕೆ ಕಾರಣವಾಗಿದ್ದ ಡೊಕ್ಲಾಂ ವಿವಾದ ಸಂಬಂಧ ಮಾತನಾಡಿದ ದಲೈಲಾಮ ಅವರು, ಡೊಕ್ಲಾ ವಿವಾದ ಬೇಕಿರಲಿಲ್ಲ. ಆದರೆ ಭವಿಷ್ಯದಲ್ಲಿ ಇಂತಹ ವಿವಾದಗಳು ಪದೇ ಪದೇ ಮರುಕಳಿಸುತ್ತಿರುತ್ತವೆ. ದಕ್ಷಿಣ ಏಷ್ಯಾದಲ್ಲಿ ಭಾರತ ಮತ್ತು ಚೀನಾ ದೇಶಗಳು ಬಲಾಢ್ಯ ರಾಷ್ಟ್ರಗಳಾಗಿದ್ದು, ತಮ್ಮ ತಮ್ಮ ಗಡಿ ರಕ್ಷಣೆ ಮಾಡಿಕೊಳ್ಳುವಷ್ಟು ಸಾಮರ್ಥ್ಯವನ್ನು ಹೊಂದಿವೆ. ಎರಡೂ ರಾಷ್ಟ್ರಗಳು ನೆರೆ-ಹೊರೆ ಜವಾಬ್ಜಾರಿಯನ್ನು ಅರಿತಿವೆ ಎಂದೆನಿಸುತ್ತದೆ. ಹೀಗಾಗಿ ನನ್ನ ಅಭಿಪ್ರಾಯದಂತೆ ಭಾರತ ಮತ್ತು ಚೀನಾ ನಡುವೆ ಮತ್ತೆ ಯುದ್ಧ ಸಂಭವಿಸುವುದ ಅಸಂಭವ ಎಂದೆನಿಸುತ್ತದೆ ಎಂದು ದಲೈಲಾಮ ಹೇಳಿದರು.