ಬ್ಲೂವೇಲ್ ನಿಷೇಧಕ್ಕೆ ದಾರಿ ಹುಡುಕಿ: ಕೇಂದ್ರ ಸರ್ಕಾರಕ್ಕೆ 'ಹೈ' ಸೂಚನೆ

ಆಪಾಯಕಾರಿ ಬ್ಲೂವೇಟ್ ಆಟಕ್ಕೆ ಹಲವು ಜನರು ಬಲಿಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮದ್ರಾಸ್ ಹೈ ಕೋರ್ಟ್, ಈ ಆಟದ ನಿಷೇಧಕ್ಕೆ ಇರುವ ಸಾಧ್ಯತೆಯನ್ನು ಕಂಡುಕೊಳ್ಳಲು ಕೇಂದ್ರ ಹಾಗೂ ತಮಿಳುನಾಡು...
ಮದ್ರಾಸ್ ಹೈ ಕೋರ್ಟ್
ಮದ್ರಾಸ್ ಹೈ ಕೋರ್ಟ್
Updated on
ಮದುರೈ: ಆಪಾಯಕಾರಿ ಬ್ಲೂವೇಟ್ ಆಟಕ್ಕೆ ಹಲವು ಜನರು ಬಲಿಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮದ್ರಾಸ್ ಹೈ ಕೋರ್ಟ್, ಈ ಆಟದ ನಿಷೇಧಕ್ಕೆ ಇರುವ ಸಾಧ್ಯತೆಯನ್ನು ಕಂಡುಕೊಳ್ಳಲು ಕೇಂದ್ರ ಹಾಗೂ ತಮಿಳುನಾಡು ಸರ್ಕಾರಕ್ಕೆ ಸೋಮವಾರ ಸೂಚನೆ ನೀಡಿದೆ. 
ಬ್ಲೂವೇಲ್ ಆಟ ಕುರಿತಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ ನ್ಯಾ.ಕೆ.ಕೆ. ಶಶಿಧರನ್ ಮತ್ತು ಜಿ.ಆರ್. ಸ್ವಾಮಿನಾಥನ್ ಅವರಿದ್ದ ಮದುರೈ ನ್ಯಾಯಾಲಯದ ಪೀಠ, ಕೇಂದ್ರ ಸರ್ಕಾರ ಮತ್ತು ತಮಿಳುನಾಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 
ನೋಟಿಸ್ ನಲ್ಲಿ ಆಟದ ನಿಷೇಧಕ್ಕೆ ಇರುವ ಎಲ್ಲಾ ಸಾಧ್ಯತೆಗಳನ್ನು ಕಂಡು ಹಿಡಿಯುವಂತೆ ಸೂಚಿಸಿದೆ. ಇದಕ್ಕೆ ನೆರವಾಗಲು ಐಐಟಿ ಮದ್ರಾಸ್ ನಿರ್ದೇಶಕರಿಗೂ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com