ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ನಾಮ್ ತಮಿಳರ್ ಕಚ್ಚಿ ಸಂಘಟನೆಯ ಕಾರ್ಯಕರ್ತರು ಎಂದು ತಿಳಿದುಬಂದಿದ್ದು, ನಿನ್ನೆ ಪಂದ್ಯ ಆರಂಭಕ್ಕೂ ಮುನ್ನ ಪಂದ್ಯವನ್ನು ಸ್ಥಗಿತಗೊಳಿಸಲು ಯತ್ನಿಸಿದ್ದರು. ಕ್ರಿಕೆಟ್ ಅಭಿಮಾನಿಗಳು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿ ಪ್ರತಿಭಟನಾ ನಿರತರು, ಫ್ಯಾನ್ಸ್ಗೆ ಥಳಿಸಿ ಸಿಎಸ್ಕೆ ಜರ್ಸಿಗಳನ್ನ ಹರಿದು ಹಾಕಿದ್ದರು. 25ಕ್ಕೂ ಹೆಚ್ಚು ಫ್ಯಾನ್ಸ್ಗಳ ಟಿಕೆಟ್ ಹರಿದು ಹಾಕಿ ಹಾಕಿದ್ದ ಕಿಡಿಕೇಡಿಗಳು, ಎಲ್ಲ ಗೇಟ್ ಗಳ ಮುಂಭಾಗದಲ್ಲಿ ಜಮಾವಣೆಯಾಗಿ ಪ್ರತಿಭಟನಾ ಘೋಷಣೆ ಕೂಗುತ್ತಿದ್ದರು.