ಉತ್ತರ ಪ್ರದೇಶ: ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ; 12 ಮಂದಿ ದುರ್ಮರಣ

ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ ಲಕ್ಕಿಮ್‌ಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ.
ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ
ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ
Updated on
ಉತ್ತರ ಪ್ರದೇಶ: ನಿಂತಿದ್ದ ಟ್ರಕ್ ಗೆ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿರುವ ಘಟನೆ  ಲಕ್ಕಿಮ್‌ಪುರ ಖೇರಿ ಜಿಲ್ಲೆಯಲ್ಲಿ  ನಡೆದಿದೆ. 
ಕೆಲಸದ ನಿಮಿತ್ತ  ವ್ಯಾನ್ ನಲ್ಲಿ 17 ಮಂದಿ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟಾಟಾ ಮ್ಯಾಜಿಕ್‌ ವ್ಯಾನ್‌ ಚಾಲಕ ಅನೂಪ್‌ ಅವಸ್ಥಿ (25), ಕ್ಲಿನರ್‌ ಕೀಶನ್‌ (23) ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆಗೆ ವೇಗದ ಚಾಲನೆಯೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಭೀಕರ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದು ಅಪಘಾತ ಸಂತ್ರಸ್ತರಿಗೆ ಸರ್ವ ರೀತಿಯಲ್ಲಿ ನೆರವಾಗುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ದುರ್ಘ‌ಟನೆಯು ಉಚೌಲಿಯಾ ಎಂಬಲ್ಲಿ ನಡೆದಿದೆ. ಶಹಜಹಾನ್‌ಪುರದಿಂದ ಸೀತಾಪುರಕ್ಕೆ ಹೋಗುತ್ತಿದ್ದ ಓವರ್‌ ಲೋಡ್‌ ಆಗಿದ್ದ ಟಾಟಾ ಮ್ಯಾಜಿಕ್‌ ವ್ಯಾನ್‌, ರಸ್ತೆ ಬದಿಯ ಹೊಟೇಲೊಂದರ ಬಳಿ ನಿಲ್ಲಿಸಲಾಗಿದ್ದ ಟ್ರಕ್ಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆಯಿತು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com