ಬಳಿಕ 1998ರ ಭಾರತದ ಅಣುಶಕ್ತಿ ಪರೀಕ್ಷೆ ಕುರಿತು ಮಾತನಾಡಿದ ಅವರು, ಪರೀಕ್ಷೆಗಳು ಮುಖ್ಯವಾಗಿದ್ದವು. ಆದರೆ, ಆ ಪರೀಕ್ಷೆಗೆ ಅನುಸರಿಸಿದ್ದ ವಿಧಾನಗಳೂ ಕೂಡ ಅತ್ಯಂತ ಪ್ರಮುಖವಾಗಿತ್ತು. ಈ ಪರೀಕ್ಷೆ ವಿಶ್ವಕ್ಕೆ ಭಾರತದ ಶಕ್ತಿ ಅರಿಯುವಂತಾಗಿತ್ತು. ಮೇ ತಿಂಗಳಿಗೆ ಅಣುಶಕ್ತಿ ಪರೀಕ್ಷಿಸಿ 20 ವರ್ಷಗಳು ಕಳೆಯುತ್ತವೆ. ದೇಶದ ಸಾಧನೆಗಳನ್ನು ಹೆಮ್ಮೆ ಪಡುವುದನ್ನು ನಾವು ಮುಂದುವರೆಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ನಾಯಕತ್ವ ಹಾಗೂ ಎಲ್ಲಾ ವಿಜ್ಞಾನಿಗಳ ಶ್ರಮಕ್ಕೆ ನಾವು ಸೆಲ್ಯೂಟ್ ಹೊಡೆಯುತ್ತೇವೆಂದಿದ್ದಾರೆ.
ಬಳಿಕ ಜಲ ಸಂರಕ್ಷಣೆ ಕುರಿತು ಪ್ರಸ್ತಾಪಿಸಿದ ಮೋದಿಯವರು, ತಮಿಳುನಾಡಿ ಕೆಲವು ದೇಗುಲಗಳಲ್ಲಿ ಅನುಸರಿಸುತ್ತಿರುವ ಜಲ ಸಂರಕ್ಷಣೆ ಕ್ರಮಗಳ ಬಗ್ಗೆ ವಿವರಿಸಿದರು. ರವೀಂದ್ರನಾಥ ಠಾಗೋರ್ ಅವರನ್ನು ನೆನಪಿಸಿಕೊಂಡ ಪ್ರಧಾನಿ ರಮ್ಜಾನ್ ಉಪವಾಸ ಹಾಗೂ ಬುದ್ಧ ಪೂರ್ಣಿಮಾ ಕುರಿತಂತೆ ಮಾತನಾಡಿದರು.
ಬಳಿಕ ಯೋಗ ಪ್ರಯೋಜನಗಳನ್ನು ವಿವರಿಸಿದ ಮೋದಿಯವರು ತ್ರಿಕೋನಾಸನ ಭಂಗಿಗಳನ್ನು ಚಿತ್ರಿಸುವ 3ಡಿ ಅನಿಮೇಟೆಡ್ ವಿಡಿಯೋ ಬಗ್ಗೆ ಪ್ರಸ್ತಾಪಿಸಿದರು.
ಆರೋಗ್ಯ ವಲಯದ ಬಗ್ಗೆ ಗಮನಹರಿಸಬೇಕಿದ್ದು, ಆರೋಗ್ಯಕ್ಕೆ ಸಂಬಂಧಿಸಿದಂತೆ ಮುಂಜಾಗ್ರತಾ ಜಾಗೃತಿಗಳು ಅಗತ್ಯವಾಗಿದೆ. ಫಿಟ್ ಇಂಡಿಯಾ ಮೂವ್'ಮೆಂಡ್'ಗೆ ಆದ್ಯತೆ ನೀಡಿ ಎಂದು ಹೇಳಿದರು. ಇದಕ್ಕೆ ಬೆಂಬಲ ನೀಡುವಂತೆ ಕಳೆದ ತಿಂಗಳು ಮಾಡಿದ್ದ ಮನವಿಗೆ ಸ್ಪಂದಿಸಿರುವುದಕ್ಕೆ ದೇಶದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿಯೂ ತಿಳಿಸಿದರು.