ಇನ್ನು ಸಿಬಿಐ ಮತ್ತು ಎಸ್ ಐಟಿ ಸಲ್ಲಿಕೆ ಮಾಡಿರುವ ತನಿಖಾ ಪ್ರಗತಿ ವರದಿಯಲ್ಲಿ ದಾಬೋಲ್ಕರ್, ಪನ್ಸಾರೆ ಮತ್ತು ಕರ್ನಾಟಕದ ವಿಚಾರವಾದಿ ಎಂಎಂ ಕಲ್ಬುರ್ಗಿ ಹತ್ಯೆ ಬಳಸಲಾಗಿರುವ ಗನ್ ಒಂದೇ ಎಂದು ಶಂಕಿಸಲಾಗಿದೆ. ಇದೇ ವಿಚಾರವನ್ನು ಉಭಯ ತನಿಕಾ ತಂಡಗಳು ಕೋರ್ಟ್ ಗೆ ಹೇಳಿದ್ದು, ಇದರಿಂದ ಸಂತುಷ್ಟಗೊಳ್ಳದ ಕೋರ್ಟ್ ತನಿಖೆಯನ್ನು ತೀವ್ರಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.