ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

ದೆಹಲಿಯ ಸಂಸತ್ ಸ್ಟ್ರೀಟ್ ನಲ್ಲಿ ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ದೆಹಲಿಯ ಸಂಸತ್ ಸ್ಟ್ರೀಟ್ ನಲ್ಲಿ ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಯೂತ್ ಈಕ್ವಾಲಿಟಿ ಫೌಂಡೇಷನ್(ಅಜಾದ್ ಸೇನ) ಮತ್ತು ಅರಕ್ಷಣ್ ವಿರೋಧಿ ಪಾರ್ಟಿಯ ಸದಸ್ಯರು ಪಾರ್ಲಿಮೆಂಟ್ ಸ್ಟ್ರೀಟ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಈ ವೇಳೆ ದೀಪಕ್ ಗೌರ್ ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದರು. 
ಈ ಸಂಬಂಧ ಆಗಸ್ಟ್ 10ರಂದು ಅಖಿಲ ಭಾರತೀಯ ಭೀಮ್ ಸೇನಾದ ಸದಸ್ಯರಾದ ಅನಿಲ್ ತನ್ವಾರಿ ದೂರು ದಾಖಲಿಸಿದ್ದರು. 
ತನಿಖೆ ಕೈಗೊಂಡ ಪೊಲೀಸರು ಈ ಸಂಬಂಧ ದೀಪಕ್ ಕೌರ್ ನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್ 153(A)/505/120B/34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಮಧುರ್ ವರ್ಮಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com