ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ನು ಪಾಕ್ ಸೇನೆಯ ನೆರಳು ಎಂದು ಹೇಳಿರುವ ಮೆಹಬೂಬಾ ಮುಫ್ತಿ, ಈ ಸಮಯದಲ್ಲಿ ಮಾತುಕತೆ ನಡೆಸಿದರೆ ಅದು ಫಲಪ್ರದವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆ ನಡೆಸುವುದಕ್ಕೆ ಸಿದ್ಧ, ಕಾರಿಡಾರ್ ಗಳನ್ನು ತೆರೆಯುವುದಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಪಾಕ್ ಸೇನೆಯ ಪ್ರತಿನಿಧಿಯೆಂದೇ ಹೇಳಲಾಗುತ್ತಿರುವ ಇಮ್ರಾನ್ ಖಾನ್ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎನ್ನುತ್ತಿದ್ದಾರೆಂದರೆ ಪಾಕ್ ಸೇನೆಯೂ ಸಹ ಮಾತುಕತೆಗೆ ಮುಕ್ತವಾಗಿದೆ ಎಂದೇ ಅರ್ಥ ಇರಬಹುದು ಎಂದು ಅಜೆಂಡಾ ಆಜ್ ತಕ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.