ಗಗನಸಖಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಪತಿಯನ್ನು ಬಂಧಿಸಿದ ಪೊಲೀಸರು!

ದೆಹಲಿಯಲ್ಲಿ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಗಗನಸಖಿಯೊರ್ವಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ...
ಅನಿಸಿಯಾ ಸಿಂಘ್ವಿ-ಮಾಯಾಂಕ್ ಸಿಂಘ್ವಿ
ಅನಿಸಿಯಾ ಸಿಂಘ್ವಿ-ಮಾಯಾಂಕ್ ಸಿಂಘ್ವಿ
Updated on
ನವದೆಹಲಿ: ದೆಹಲಿಯಲ್ಲಿ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಗಗನಸಖಿಯೊರ್ವಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಮೃತ 39 ವರ್ಷದ ಅನಿಸಿಯಾ ಬಾತ್ರಾ ಜರ್ಮನ್ ಏರ್ ಲೈನ್ಸ್ ನ ಉದ್ಯೋಗಿಯಾಗಿದ್ದು ಜುಲೈ 13ರಂದು ಸಂಜೆ ಪಂಚಶೀಲ ಪಾರ್ಕ್ ಕಟ್ಟಡದಿಂದ ಕೆಳಗೆ ಹಾರಿದ್ದರು. ಕೂಡಲೇ ಆಕೆಯ ಪತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗಮಧ್ಯೆ ಅನಿಸಿಯಾ ಮೃತಪಟ್ಟಿದ್ದರು. 
ಅನಿಸಿಯಾದು ಆತ್ಮಹತ್ಯೆಯಲ್ಲ ಕೊಲೆಯೆಂದು ಆಕೆಯ ಪೋಷಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಉದ್ಯೋಗಿ ಮಾಯಾಂಕ್ ಸಿಂಘ್ವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 
ಪೊಲೀಸರು ಮಂಗಳವಾರ ಮಾಯಾಂಕ್ ಸಿಂಘ್ವಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com