ಗಗನಸಖಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಪತಿಯನ್ನು ಬಂಧಿಸಿದ ಪೊಲೀಸರು!

ದೆಹಲಿಯಲ್ಲಿ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಗಗನಸಖಿಯೊರ್ವಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ...
ಅನಿಸಿಯಾ ಸಿಂಘ್ವಿ-ಮಾಯಾಂಕ್ ಸಿಂಘ್ವಿ
ಅನಿಸಿಯಾ ಸಿಂಘ್ವಿ-ಮಾಯಾಂಕ್ ಸಿಂಘ್ವಿ
ನವದೆಹಲಿ: ದೆಹಲಿಯಲ್ಲಿ ಅಪಾರ್ಟ್ ಮೆಂಟ್ ನಿಂದ ಕೆಳಗೆ ಹಾರಿ ಗಗನಸಖಿಯೊರ್ವಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. 
ಮೃತ 39 ವರ್ಷದ ಅನಿಸಿಯಾ ಬಾತ್ರಾ ಜರ್ಮನ್ ಏರ್ ಲೈನ್ಸ್ ನ ಉದ್ಯೋಗಿಯಾಗಿದ್ದು ಜುಲೈ 13ರಂದು ಸಂಜೆ ಪಂಚಶೀಲ ಪಾರ್ಕ್ ಕಟ್ಟಡದಿಂದ ಕೆಳಗೆ ಹಾರಿದ್ದರು. ಕೂಡಲೇ ಆಕೆಯ ಪತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗಮಧ್ಯೆ ಅನಿಸಿಯಾ ಮೃತಪಟ್ಟಿದ್ದರು. 
ಅನಿಸಿಯಾದು ಆತ್ಮಹತ್ಯೆಯಲ್ಲ ಕೊಲೆಯೆಂದು ಆಕೆಯ ಪೋಷಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸಾಫ್ಟ್ ವೇರ್ ಉದ್ಯೋಗಿ ಮಾಯಾಂಕ್ ಸಿಂಘ್ವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. 
ಪೊಲೀಸರು ಮಂಗಳವಾರ ಮಾಯಾಂಕ್ ಸಿಂಘ್ವಿಯನ್ನು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com