ನವದೆಹಲಿ: ಗುರ್ಗಾವ್ ನ ಖಾಸಗಿ ಶಾಲೆಯಲ್ಲಿ 7 ವರ್ಷದ ಬಾಲಕನನ್ನು ಕೊಲೆ ಮಾಡಿದ ಪ್ರಕರಣದ ಬಾಲ ಆರೋಪಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿ ಆರ್ ಎಫ್ ನಾರಿಮನ್ ಮತ್ತು ಇಂದು ಮಲ್ಹೋತ್ರಾ ಅವರನ್ನಳಗೊಂಡ ವಿಭಾಗೀಯ ಪೀಠ ಜಾಮೀನು ನಿರಾಕರಿಸಿದೆ. ಐಪಿಸಿ ಸೆಕ್ಷನ್ 302ರ ಪ್ರಕಾರ ಇದೊಂದು ಕ್ರೂರ ಅಪರಾಧ ಎಂದು ಪೀಠ ತಿಳಿಸಿದೆ.
90 ದಿನಗಳೊಳಗೆ ಜಾರ್ಜ್ ಶೀಟ್ ಸಲ್ಸಿಸಬೇಕು ಎಂದು ಹೇಳಿದೆ. ಜೂನ್ 6 ರಂದು ಪಂಜಾಹ್ ಹರ್ಯಾಣ ಹೈಕೋರ್ಟ್ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ 60 ದಿನಗಳೊಳಗೆ ಚಾರ್ಜ್ ಶೀಟ್ ಸಲ್ಲಿಸಲು ವಿಫಲವಾಗಿತ್ತು.