ಗೋರಕ್ಷಕರ ದಾಳಿ ತಡೆಯದಿದ್ದರೆ ಭಾರತ ಮತ್ತೆ ವಿಭಜನೆ: ಪಿಡಿಪಿ ನಾಯಕನ ಎಚ್ಚರಿಕೆ

ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ಮುಂದುವರೆಸಿದರು ಭಾರತ ಮತ್ತೆ ವಿಭಜನೆಯಾಗಲಿದೆ...
ಮುಜಾಫರ್ ಹುಸೇನ್ ಬೇಗ್
ಮುಜಾಫರ್ ಹುಸೇನ್ ಬೇಗ್
Updated on
ಶ್ರೀನಗರ: ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿ ಮುಂದುವರೆಸಿದರು ಭಾರತ ಮತ್ತೆ ವಿಭಜನೆಯಾಗಲಿದೆ ಎಂದು ಪಿಡಿಪಿಯ ಹಿರಿಯ ನಾಯಕ, ಸಂಸದ ಮುಜಾಫರ್ ಹುಸೇನ್ ಬೇಗ್ ಅವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.
ನಿತ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಯಬೇಕು ಎಂದಿರುವ ಬೇಗ್, ಈಗಾಗಲೇ ಭಾರತ 1947ರಲ್ಲಿ ಒಂದು ಬಾರಿ ವಿಭಜನೆಯಾಗಿದೆ. ಈಗ ಮುಸ್ಲಿಮರ ಹತ್ಯೆ ಮುಂದುವರೆದರೆ ಮತ್ತೊಂದು ವಿಭಜನೆ ಎದುರಾಗಲಿದೆ ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
1947ರಲ್ಲಿ ನಡೆದ ವಿಭಜನೆಯ ತಪ್ಪನ್ನು ಈಗ ಸರಿಪಡಿಸಲು ಸಾಧ್ಯವಿಲ್ಲ. ಆದರೆ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಾಳಿಯನ್ನು ತಡೆಯಬಹುದು ಬೇಗ್ ಹೇಳಿದ್ದಾರೆ.
ನಿನ್ನೆ ಪಿಡಿಪಿಯ 19ನೇ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ್ದ ಬೇಗ್, ಗೋವು, ಎಮ್ಮೆಗಳ ಹೆಸರಿನಲ್ಲಿ ಮುಸ್ಲಿಂರ ಹತ್ಯೆಗಳನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ, ಫಲಿತಾಂಶ ಒಳ್ಳೇಯ ರೀತಿಯದ್ದಾಗಿರುವುದಿಲ್ಲ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com