ಈ ಸಂಬಂಧದ ವಿಚಾರಣೆಗಾಗಿ ಆತನನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಸಿಬಿಐ ಇಟಲಿಗೆ ಮನವಿ ಮಾಡಿಕೊಂಡಿತ್ತು. ಅಲ್ಲದೆ, ಈ ಪ್ರಕರಣದಲ್ಲಿ ಭಾರತದ ಯಾವೆಲ್ಲಾ ರಾಜಕಾರಣಿಗಳು, ವಾಯುಪಡೆಯ ಮಾಜಿ ಮುಖ್ಯಸ್ಥ ಕೆ.ಸಿ.ತ್ಯಾಗಿ ಸೇರಿದಂತೆ ಐಎಎಪ್, ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಇತರೆ ಖಾಸಗಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಹಾಗೂ ಭಾರತದ ಯಾವೆಲ್ಲಾ ವ್ಯಕ್ತಿಗಳಿಗೆ ಲಂಚ ನೀಡಲಾಗಿದೆ ಎಂಬುದರ ಮಾಹಿತಿಗಳನ್ನು ಭೇದಿಸುವುದು ಗೆರೋಸಾ ವಿಚಾರಣೆಯಿಂದ ಮಾತ್ರ ಸಾಧ್ಯ ಎಂದು ಸಿಬಿಐ ಪ್ರತಿಪಾದಿಸಿತ್ತು.