ನೀರವ್, ಮಲ್ಯ ಮಾತ್ರವಲ್ಲ, ಕನಿಷ್ಠ 31 ಉದ್ಯಮಿಗಳು ಹಗರಣಗಳ ನಂತರ ದೇಶ ಬಿಟ್ಟು ಹೋಗಿದ್ದಾರೆ!

91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸುವ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿರುವ ನಡುವೆಯೇ ಒಟ್ಟು 31 ಆರ್ಥಿಕ ಅಪರಾಧಿಗಳು ಈಗಾಗಲೇ ಭಾರತದಿಂದ ವಿದೇಶಕ್ಕೆ
ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರ
ನವದೆಹಲಿ: 91 ಸುಸ್ತಿದಾರರಿಗೆ ಭಾರತ ಬಿಟ್ಟು ತೆರಳುವುದಕ್ಕೆ ನಿರ್ಬಂಧ ವಿಧಿಸುವ ಆಯ್ಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸುತ್ತಿರುವ ನಡುವೆಯೇ ಒಟ್ಟು 31 ಆರ್ಥಿಕ ಅಪರಾಧಿಗಳು ಈಗಾಗಲೇ ಭಾರತದಿಂದ ವಿದೇಶಕ್ಕೆ ಹಾರಿದ್ದಾರೆ. 
ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದ್ದು, ನೀರವ್ ಮೋದಿ ಸೇರಿದಂತೆ ಒಟ್ಟು 31 ಆರ್ಥಿಕ ಅಪರಾಧಿಗಳು ಈಗಾಗಲೇ ವಿದೇಶಗಳಿಗೆ ತೆರಳಿದ್ದಾರೆ ಎಂದು ಹೇಳಿದೆ.  ವಿದೇಶಾಂಗ ಇಲಾಖೆ ರಾಜ್ಯ ಸಚಿವ ಎಂಜೆ ಅಕ್ಬರ್ ಈ ಬಗ್ಗೆ ಮಾಹಿತಿ ನೀಡಿದ್ದು, ಯಾವಾಗಿನಿಂದ ಈ ಎಲ್ಲಾ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. 
ಸಿಬಿಐ ನಿಂದ ಈ ಎಲ್ಲಾ ಆರೋಪಿಗಳ ಹಸ್ತಾಂತರಕ್ಕೆ ಮನವಿ ಬಂದಿದ್ದು, ವಿದೇಶಗಳಿಗೆ ಅಪರಾಧಿಗಳನ್ನು ಹಸ್ತಾಂತರಿಸುವಂತೆ ಕೋರಿಕೆ ಸಲ್ಲಿಸಲಾಗಿದೆ ಎಂದು ಎಂಜೆ ಅಕ್ಬರ್ ಲೋಕಸಭೆಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com