ಕರ್ನಾಟಕ ಇದೀಗ ನಮ್ಮ ಹಸ್ತದಲ್ಲಿದೆ. ಎಲ್ಲಿ ತಾನು ಅಧಿಕಾರ ಕಳೆದುಕೊಳ್ಳುತ್ತೇನೆಂಬ ಭೀತಿಯಲ್ಲಿ ಕಾಂಗ್ರೆಸ್ ಇದೆ. ರಾಹುಲ್ ಗಾಂಧಿಯವರು ಮೋದಿ, ಬಿಜೆಪಿ ಅಥವಾ ಯಾರ ಮೇಲಾದರೂ ಟೀಕೆ, ವಾಗ್ದಾಳಿ ನಡೆಸಬಹುದು. ಆದರೆ, ದೇಶದ ಮೇಲೆ ದಾಳಿ ನಡೆಸುವುದು ಸರಿಯಲ್ಲ. ದೇಶ ಅತ್ಯಂತ ಮುಖ್ಯವಾದದ್ದು, ಅಂತಹ ದೇಶವನ್ನು ಕೀಳು ದೇಶವಾಗಿರುವ ಪಾಕಿಸ್ತಾನಕ್ಕೆ ಹೋರಿಗೆ ಮಾಡಿರುವುದು ಅವಮಾನ ಮಾಡಿದಂತೆ. ರಾಹುಲ್'ಗೆ ಈ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲವೇ? ರಾಹುಲ್ ಮೊದಲು ಮಾನಸಿಕ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕಿದೆ ಎಂದಿದ್ದಾರೆ.