ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಿಸಿ: ಬಿಜೆಪಿಗೆ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್

ಉತ್ತರ ಪ್ರದೇಶದಲ್ಲಿ ಮರುನಾಮಕರಣ ಮಾಡುತ್ತಿರುವ ಬಿಜೆಪಿ ನಡೆಯ ಬಗ್ಗೆ ಉತ್ತರ ಪ್ರದೇಶ ಮಿತ್ರ ಪಕ್ಷದ ನಾಯಕ, ಸಚಿವ ಓಂ ಪ್ರಕಾಶ್ ವ್ಯಂಗ್ಯವಾಡಿದ್ದು, ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಾವಣೆ
ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಿಸಿ: ಬಿಜೆಪಿಗೆ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್
ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಿಸಿ: ಬಿಜೆಪಿಗೆ ಉತ್ತರ ಪ್ರದೇಶ ಸಚಿವ ಓಂ ಪ್ರಕಾಶ್
ಲಖನೌ: ಉತ್ತರ ಪ್ರದೇಶದಲ್ಲಿ ಮರುನಾಮಕರಣ ಮಾಡುತ್ತಿರುವ ಬಿಜೆಪಿ ನಡೆಯ ಬಗ್ಗೆ ಉತ್ತರ ಪ್ರದೇಶ ಮಿತ್ರ ಪಕ್ಷದ ನಾಯಕ, ಸಚಿವ ಓಂ ಪ್ರಕಾಶ್ ವ್ಯಂಗ್ಯವಾಡಿದ್ದು, ನಿಮ್ಮ ಮುಸ್ಲಿಂ ನಾಯಕರ ಹೆಸರನ್ನು ಮೊದಲು ಬದಲಾವಣೆ ಮಾಡಿ ಎಂದು ಹೇಳಿದ್ದಾರೆ. 
ಮುಘಲರು ನಗರಗಳಿಗೆ ಇಟ್ಟಿದ್ದ ಹೆಸರನ್ನು ಬಿಜೆಪಿ ಬದಲಾವಣೆ ಮಾಡುತ್ತಿದೆ. ಆದರೆ ಶಹನವಾಜ್ ಹುಸೇನ್, ಮುಕ್ತಾರ್ ಅಬ್ಬಾಸ್ ನಖ್ವಿ, ಉತ್ತರ ಪ್ರದೇಶ ಸಚಿವ ಮೊಹ್ಸಿನ್ ರಾಜ ಬಿಜೆಪಿಯಲ್ಲಿದ್ದಾರೆ. ಈ ಮೂವರು ಬಿಜೆಪಿ ನಾಯಕರ ಹೆಸರನ್ನು ಮೊದಲು ಬದಲಾವಣೆ ಮಾಡಿ ಎಂದು ಎಸ್ ಬಿಎಸ್ ಪಿ ನಾಯಕ ಓಂ ಪ್ರಕಾಶ್ ಹೇಳಿದ್ದಾರೆ. 
ಜಿಟಿ ರಸ್ತೆ ಮುಸ್ಲಿಂ ರಾಜರು ನಿರ್ಮಿಸಿದ್ದರು, ಈಗ ಅದನ್ನು ತೆಗೆದುಹಾಕುತ್ತೀರಾ? ಶೇರ್ ಷಾ ಸೂರಿ ಆ ರಸ್ತೆಯನ್ನು ನಿರ್ಮಿಸಿದ್ದು, ಮುಸ್ಲಿಂ ದೊರೆ ನಿರ್ಮಿಸಿರುವ ರಸ್ತೆಯನ್ನು ಬಳಕೆ ಮಾಡುವುದಕ್ಕೆ ಜನರಿಗೆ ಏಕೆ ಅನುಮತಿ ನೀಡುತ್ತೀರಿ? ಎಂದು ಬಿಜೆಪಿಗೆ ಓಂ ಪ್ರಕಾಶ್ ಕೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com