ಇದೇ ವೇಳೆ ಮೀಟೂ ಆರೋಪ ಎದುರಿಸುತ್ತಿರುವ ನಟ ಅರ್ಜುನ್ ಸರ್ಜಾ ಅವರಿಗೂ ಪರೋಕ್ಷ ಟಾಂಗ್ ನೀಡಿದ ಪ್ರಕಾಶ್ ರೈ, ಉದ್ದೇಶ ಪೂರ್ವಕ ಮಾಡಿಲ್ಲ ಎಂದ ಮಾತ್ರಕ್ಕೆ ಪರರ ನೋವು ಸತ್ಯವೆಂದಲ್ಲ. ಉದ್ದೇಶ ಪೂರ್ವಕ ಮಾಡಿಲ್ಲವೆಂದರೂ ಕ್ಷಮೆ ಕೇಳುವುದು ಉತ್ತಮ ವ್ಯಕ್ತಿಯ ಲಕ್ಷಣ ಎಂದು ಹೇಳಿದ್ದಾರೆ. ಅಲ್ಲದೆ ತಾವೂ ಮೀಟೂ ಪರವಿದ್ದು, ಮಹಿಳೆಯರ ಬೆಂಬಲಕ್ಕೆ ತಾವು ಸದಾ ಮುಂದಿರುತ್ತೇವೆ ಎಂದು ಘೋಷಣೆ ಮಾಡಿದರು.