ನವದೆಹಲಿ: ಬಿಹಾರ ಸೆಕ್ಸ್ ಹಗರಣದಲ್ಲಿ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಏಕೆ ಬಂಧಿಸಿಲ್ಲ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ಪ್ರಶ್ನಿಸಿದೆ, ಮುಜಾಫರಪುರ್ ವಸತಿ ನಿಲಯವನ್ನು ಬಿಹಾರ ಮಾಜಿಸಚಿವೆ ಮಂಜು ವರ್ಮಾ ಪತಿ ನಡೆಸುತ್ತಿದ್ದರು.
ನ್ಯಾಯಮೂರ್ತಿ ಎಂಬಿ ಲೊಕೂರ್ , ಎಸ್ ಎ ನಜೀರ್ ಮತ್ತು ದೀಪಕ್ ಗುಪ್ತಾ ಹಾಗೂ ಬ್ರಜೇಶ್ ಠಾಕೂರ್ ಅವರನ್ನೊಳಗೊಂಡ ಪೀಠ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮುಜಾಫರಪುರದ ಸರ್ಕಾರಿ ಆಶ್ರಯ ತಾಣದಲ್ಲಿದ್ದ 40 ಬಾಲಕಿಯರ ಪೈಕಿ 34 ಬಾಲಕಿಯರ ಮೇಲೆ ಅಲ್ಲಿನ ಸಿಬ್ಬಂದಿ, ಅದಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಅತ್ಯಾಚಾರ ಎಸಗಿದ ಪ್ರಕರಣ ತನಿಖೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಿಬಿಐಗೆ ಒಪ್ಪಿಸಿದ್ದಾರೆ.