ಭದ್ರತಾ ಸೌಲಭ್ಯ ಹಿಂಪಡೆಯುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ  ಅಣ್ಣಾ ಹಜಾರೆ ಪತ್ರ 

ಮಹಾರಾಷ್ಟ್ರ ಸರ್ಕಾರದಿಂದ  ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ  ಒತ್ತಾಯಿಸಿದ್ದಾರೆ.
ಅಣ್ಣಾ ಹಜಾರೆ
ಅಣ್ಣಾ ಹಜಾರೆ
Updated on

ಪುಣೆ:  ಮಹಾರಾಷ್ಟ್ರ ಸರ್ಕಾರದಿಂದ  ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ  ಒತ್ತಾಯಿಸಿದ್ದಾರೆ.

ಈ ಸಂಬಂಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರಿಗೆ ಅಣ್ಣಾ ಹಜಾರೆ ಪತ್ರ ಬರೆದಿದ್ದು,  ಸಾರ್ವಜನಿಕ ಹಣವನ್ನು ವ್ಯರ್ಥ್ಯ ಮಾಡಿ ಭದ್ರತಾ ಸೌಲಭ್ಯ ನೀಡುವುದು ಬೇಡ ಎಂದಿದ್ದಾರೆ. 

ಈ ಹಿಂದೆ ಅನೇಕ ಜನರು ತಮನ್ನು ಬೆದರಿಸಿದ್ದಾರೆ. ಆದರೆ, ಅವರನ್ನು ಯಾವಾಗಲೂ ನಿರ್ಲಕ್ಷಿಸಿರುವುದಾಗಿ ಹೇಳಿರುವ ಅಣ್ಣಾ ಹಜಾರೆ, ತಮಗೆ ನೀಡಲಾಗಿರುವ ಭದ್ರತಾ ಸೌಲಭ್ಯವನ್ನು ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಆದರೆ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಈ ಮಧ್ಯೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್ ಸೇರಿದಂತೆ ಕೆಲ ಗಣ್ಯ ವ್ಯಕ್ತಿಗಳಿಗೆ ನೀಡಿದ ಭದ್ರತಾ ಸೌಲಭ್ಯವನ್ನು ಸರ್ಕಾರ ಹಿಂಪಡೆದಿದ್ದು, ತಮಗೂ ನೀಡಲಾಗಿರುವ ಭದ್ರತಾ ಸೌಲಭ್ಯ ಹಿಂಪಡೆಯುವಂತೆ  ಒತ್ತಾಯಿಸಿ ಅಣ್ಣಾ ಹಜಾರೆ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com