ಇದೇ ವೇಳೆ ಪಂಜಾಬ್ ರಾಜ್ಯವನ್ನು ಹೆಸರಿಸಿ ಮಾತನಾಡಿದ ಅವರು, ಈ ರಾಜ್ಯದಲ್ಲಿಯೂ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಇದು ಸತ್ಯಕ್ಕೆ ದೂರವಾಗಿದೆ. ಸತ್ಯವೇ ಬೇರೆಯಾಗಿದೆ. ಅವರು ನೀಡುರುವ ದಾಖಲೆಯಂತೆಯೇ ರೂ.3,400 ಕೋಟಿ ಸಾಲವನ್ನು ಒಂದೂ ವರ್ಷದಲ್ಲಿ ಮನ್ನಾ ಮಾಡಿದ್ದಾರೆ. ಸಾಲ ಮನ್ನಾ ಕಾಂಗ್ರೆಸ್'ಗೆ ಐದು ವರ್ಷಗಳ ಯೋಜನೆಯೇ? ರೈತರ ಸಾವಿನ ಬಳಿಕ ಸಾಲ ಮನ್ನಾ ಮಾಡುತ್ತಾರೆಯೇ? ಗ್ರಾಮೀಣಾಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಶ್ರಮ ಪಡುತ್ತಿದೆ. 2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದ್ದೇವೆ. ರೈತರ ಶಕ್ತಿಯನ್ನು ಹೆಚ್ಚಿಸಲು, ಸ್ವಯಂ ಅವಲಂಬಿತರಾಗಿರುವಂತೆ ಮಾಡಲು ಶ್ರಮ ಪಡುತ್ತಿದ್ದೇವೆ.