ತಮಿಳುನಾಡು: ಶಸ್ತ್ರ ಸಜ್ಜಿತ ಗ್ಯಾಂಗ್ ನಿಂದ ದಲಿತ ದಂಪತಿಯ ಕೊಲೆ, ಮರ್ಯಾದಾ ಹತ್ಯೆ ಶಂಕೆ

ತಮಿಳುನಾಡಿನ ತೂತುಕುಡಿಯಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದ ಪ್ರೇಮಿಗಳಿಬ್ಬರನ್ನು ಶಸ್ತ್ರ ಸಜ್ಜಿತ ಗುಂಪೊಂದು ಕೊಲೆ ಮಾಡಿದ್ದು...
ಹತ್ಯೆಯಾದ ದಲಿತ ದಂಪತಿ
ಹತ್ಯೆಯಾದ ದಲಿತ ದಂಪತಿ
Updated on
ತೂತುಕುಡಿ: ತಮಿಳುನಾಡಿನ ತೂತುಕುಡಿಯಲ್ಲಿ ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದ ಪ್ರೇಮಿಗಳಿಬ್ಬರನ್ನು ಶಸ್ತ್ರ ಸಜ್ಜಿತ ಗುಂಪೊಂದು ಕೊಲೆ ಮಾಡಿದ್ದು, ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ದಲಿತ ದಂಪತಿಯ ಹತ್ಯೆಯ ಹಿಂದೆ ಯುವತಿ ಸಂಬಂಧಿಗಳ ಕೈವಾಡವಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಹತ್ಯೆಯಾದ ದಂಪತಿಗಳನ್ನು ಟಿ ಸೋಲರಾಜ್ (23) ಮತ್ತು ಎಸ್ ಪೆಚ್ಚಾಮ್ಮಾಳ್ ಅಲಿಯಾಸ್ ಜ್ಯೋತಿ(20) ಎಂದು ಗುರುತಿಸಲಾಗಿದೆ. ವಿದ್ಯುತ್ ಇಲ್ಲದ ಹಿನ್ನೆಲೆಯಲ್ಲಿ ಮನೆಯ ಹೊರಗಡೆ ಮಲಗ್ಗಿದ್ದ ನವ ದಂಪತಿಗಳನ್ನು ದುಷ್ಕರ್ಮಿಗಳ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪರಯಾರ್ ಸಮುದಾಯಕ್ಕೆ ಸೇರಿದ್ದ ಸೋಲರಾಜ್ ಪಲ್ಲಾರ್ ಹುಡುಗಿ ಪೆಚ್ಚಾಮ್ಮಾಳ್ ಅವರನ್ನು ಕಳೆದ ಏಪ್ರಿಲ್ 15ರಂದು ಮದುವೆಯಾಗಿದ್ದರು. ಇಬ್ಬರು ಪೆರಿಯಾರ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಈ ಇಬ್ಬರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೂ ಪರಯಾರ್ ಗಿಂತ ಪಲ್ಲಾರ್ ಮೇಲಿನ ಜಾತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸೋಲರಾಜ್ ಜತೆ ಮದುವೆಗೆ ಪೆಚ್ಚಾಮ್ಮಾಳ್ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಮೃತ ದೇಹಗಳನ್ನು ತೂತುಕುಡಿ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೊಲತ್ತೂರ್ ಪೊಲೀಸರು, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com