ಬಂಡೀಪುರ ರಾಷ್ಟ್ರೀಯ ಉದ್ಯಾನದ ಮಧ್ಯದಿಂದ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಕೇರಳ ಗಡಿಯ ಮುತ್ತಂಗ ಎಂಬಲ್ಲಿ ಸವಾರರಿಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ತಮ್ಮ ಮೊಬೈಲ್ ನಲ್ಲಿ ಪ್ರಕೃತಿಯ ಸೊಬಗನ್ನು ಚಿತ್ರೀಸಿಕೊಳ್ಳುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತ್ತಿದ್ದ ಹುಲಿಯೊಂದು ವೇಗವಾಗಿ ಬಂದು ದಾಳಿಗೆ ಮುಂದಾಗಿದೆ. ಆದರೆ ಬೈಕ್ ಸ್ವಲ್ಪ ವೇಗವಾಗಿದ್ದರಿಂದ ಬೇಟೆಯಾಡಲು ಸಾಧ್ಯವಾಗದೆ ಪಕ್ಕಕ್ಕೆ ಹೋಗಿದೆ.