ರಾಮದಾಸ್ ಅಥಾವಳೆ
ದೇಶ
ಮಾಯಾವತಿಗೆ ಮದುವೆಯಾಗಿಲ್ಲ,ಹಾಗಾಗಿ ಕುಟುಂಬದ ಬಗ್ಗೆ ಗೊತ್ತಿಲ್ಲ: ರಾಮದಾಸ್ ಅಠಾವಳೆ
ಮಾಯಾವತಿ ಅವರಿಗೆ ವಿವಾಹವಾಗಿಲ್ಲ, ಹಾಗಾಗಿ ಅವರಿಗೆ ಕುಟುಂಬದ ಬಗ್ಗೆ ಗೊತ್ತಿಲ್ಲ, ಅವರಿಗೆ ಪತಿಯನ್ನು ನಿರ್ವಹಿಸಲು ತಿಳಿದಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ...
ವಾರಣಾಸಿ: ಮಾಯಾವತಿ ಅವರಿಗೆ ವಿವಾಹವಾಗಿಲ್ಲ, ಹಾಗಾಗಿ ಅವರಿಗೆ ಕುಟುಂಬದ ಬಗ್ಗೆ ಗೊತ್ತಿಲ್ಲ, ಅವರಿಗೆ ಪತಿಯನ್ನು ನಿರ್ವಹಿಸಲು ತಿಳಿದಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಪತ್ನಿ ಜೊತೆ ಸಂಸಾರ ಮಾಡಿ ಅನುಭವವಿಲ್ಲ, ಹೀಗೀರುವಾಗ ಅವರು ಬಿಜೆಪಿಯಲ್ಲಿರುವ ಮಹಿಳಾ ನಾಯಕಿಯರಿಗೆ ಹೇಗೆ ಗೌರವ ನೀಡುತ್ತಾರೆ ಎಂದು ನಿರೀಕ್ಷಿಸಲು ಹೇಗೆ ಸಾಧ್ಯ ಮಾಯಾವತಿ ಪ್ರಶ್ನಿಸಿದ್ದರು.
ವಾರಾಣಾಸಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಂಡು ಮಾತನಾಡಿದ ರಾಮದಾಸ್ ಅಠಾವಳೆ ಮಾಯಾವತಿ ಅವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ, ಜೊತೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್ ಜೆಡಿ ಮುಖಂಡ ಅಜಿತ್ ಸಿಂಗ್ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ, ಇದಕ್ಕೆಲ್ಲಾ ಮೇ 23 ರಂದು ಉತ್ತರ ದೊರಕಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ