ಚೆನ್ನೈ: ಆ ಜೋಡಿ ಮದುವೆಯಾಗಿ ಕೇವಲ 20 ದಿನಗಳಾಗಿತ್ತಷ್ಟೆ ಪತಿ ಮದ್ಯವ್ಯಸನಿ ಎಂದು ತಿಳಿದ ನವ ವಧು ಆತನೊಡನೆ ಬದುಕು ಕಷ್ಟ ಎಂದು ಭಾವಿಸಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿಬಿಟ್ಟಿದ್ದಾಳೆ.
ತಮಿಳುನಾಡಿನ ತಿಂಡಿವನಂ ಸಮೀಪದ ಟಿ ವಿ ನಗರ್ ಬಳಿ ಗುರುವಾರ ರಾತ್ರಿ ಈ ಭೀಕರ ಘಟನೆ ನಡೆದಿದ್ದು, ಮೃತನನ್ನು ಸೇತುಪತಿ(24) ಎಂದು ಗುರುತಿಸಲಾಗಿದೆ. ಪಂಕ್ಚರ್ ಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೇತುಪತಿ ಈ ಮೊದಲೇ ಪರಿಚಯವಿದ್ದ ಮುರಗವೇಣಿಯನ್ನು 20 ದಿನಗಳ ಹಿಂದೆ ಮದುವೆಯಾಗಿದ್ದ.
ಆದರೆ ವಿವಾಹದ ಬಳಿಕ ಪತ್ನಿಯ ಮೇಲೆ ಶಂಕೆ ವ್ಯಕ್ತಪಡಿಸಲು ಆರಂಭಿಸಿದ್ದ ಅಲ್ಲದೆ ಕುಡಿತದ ದಾಸನಾದ ಕಾರಣ, ಇಬ್ಬರ ನಡುವಿನ ಸಂಬಂಧ ಹದಗೆಡಲಾರಂಭಿಸಿತು.