ಕೊರೋನಾ ಪೀಡಿತ ವ್ಯಕ್ತಿಗಳು ಹತ್ತಿದಲ್ಲಿದ್ದರೆ ಕೂಡಲೇ ನಿಮಗೆ ಅಲರ್ಟ್ ನೀಡುತ್ತ ಈ ಆ್ಯಪ್...!

ವೈರಸ್ ತಟ್ಟುವ ಬಗ್ಗೆ ಮುನ್ನೆಚ್ಚರಿಕೆ ನೀಡು ಹಾಗೂ ಸೋಂಕು ತಗುಲಿರುವ ವ್ಯಕ್ತಿ ನಿಮ್ಮ ಹತ್ತಿರದಲ್ಲಿದ್ದರೆ ಮಾಹಿತಿ ನೀಡುವ ಆ್ಯಪ್ ವೊಂದನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ವೈರಸ್ ತಟ್ಟುವ ಬಗ್ಗೆ ಮುನ್ನೆಚ್ಚರಿಕೆ ನೀಡು ಹಾಗೂ ಸೋಂಕು ತಗುಲಿರುವ ವ್ಯಕ್ತಿ ನಿಮ್ಮ ಹತ್ತಿರದಲ್ಲಿದ್ದರೆ ಮಾಹಿತಿ ನೀಡುವ ಆ್ಯಪ್ ವೊಂದನ್ನು ಕೇಂದ್ರ ಸರ್ಕಾರ ಗುರುವಾರ ಬಿಡುಗಡೆ ಮಾಡಿದೆ. 

ದೇಶದಲ್ಲಿ ಕೊರೋನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮಹಾಮಾರಿಯನ್ನು ತಡೆಗಟ್ಟಲು ಆರೋಗ್ಯ ಸೇತು ಎನ್ನು ಆ್ಯಪ್'ನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಈ ಅಪ್ಲಿಕೇಶನ್ ಹಿಂದಿ, ಇಂಗ್ಲೀಷ್ ಹಾಗೂ ಇತರೆ 11 ಭಾಷೆಗಳಲ್ಲಿ ಏಕಕಾಲದಲ್ಲಿ ಪ್ರಾರಂಭಿಸಲಾಗಿದೆ. ಪ್ಲೇ ಸ್ಟೋರ್ ಮೂಲಕ ಉಚಿತವಾಗಿ ಈ ಆ್ಯಪ್ ನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಆ್ಯಪ್ ಮೂಲಕ ಕೊರೋನಾ ವೈರಸ್'ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ನಿಮ್ಮ ಮೊಬೈಲ್ ನಲ್ಲಿ ಲಭ್ಯವಿರಲಿದೆ ಎಂದು ತಿಳಿದುಬಂದಿದೆ. 

ಸೋಂಕಿತನ ಮಾಹಿತಿ ದಾಖಲಿಸಿಕೊಂಡು, ಒಂದು ವೇಳೆ ನಿಮ್ಮ ಹತ್ತಿರ ಸೋಂಕಿತ ಇದ್ದರೆ, ಈ ಅ್ಯಪ್ ಸಂದೇಶ ರವಾನಿಸುತ್ತದೆ. ಯಾರಿಗಾದರೂ ಸೋಂಕು ತಗುಲಿದರೆ, ಅವರ ಮೊಬೈಲ್ ಸಂಖ್ಯೆಯನ್ನು ಆ್ಯಪ್ ನಲ್ಲಿ ಸಚಿವಾಲಯ ಅಪ್ಡೇಟ್ ಮಾಡಲಿದೆ. 

ಆ ಮೂಲಕ ಆ ವ್ಯಕ್ತಿ ಇರುವ ಪ್ರದೇಶಕ್ಕೆ ನೀವು ತೆರಳಿದರೆ ಆ್ಯಪ್ ಎಚ್ಚರಿಕೆ ನೀಡುತ್ತದೆ. ಅಲ್ಲದೇ, ನೀವು ಸೋಂಕಿತರು ಇರುವ ಪ್ರದೇಶಕ್ಕೆ ತೆರಳಿದರೆ, ಸೋಂಕು ತಟ್ಟುವ ಸಾಧ್ಯತೆಯನ್ನೂ ಆ್ಯಪ್ ನಿಮಗೆ ನೀಡಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com