ವಿದೇಶಿ ಯೋಧರು ಗಡಿ ಪ್ರವೇಶಿಸಿದ್ದರೂ, 7 ವಾರಗಳಿಂದ ಪ್ರಧಾನಿ ಮೋದಿ ಮೌನವಾಗಿದದ್ದೇಕೆ: ಚಿದಂಬರಂ ಪ್ರಶ್ನೆ

ವಿದೇಶದ ಸೈನಿಕರು ನಮ್ಮ ಗಡಿ ಪ್ರವೇಶಿಸಿದ್ದರೂ, ಕಳೆದ 7 ವಾರಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿದ್ದೇಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದಾರೆ. 
ಚಿದಂಬರಂ
ಚಿದಂಬರಂ
Updated on

ನವದೆಹಲಿ: ವಿದೇಶದ ಸೈನಿಕರು ನಮ್ಮ ಗಡಿ ಪ್ರವೇಶಿಸಿದ್ದರೂ, ಕಳೆದ 7 ವಾರಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ತಾಳಿದ್ದೇಕೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಪ್ರಶ್ನಿಸಿದ್ದಾರೆ. 

ಲಡಾಖ್ ಗಡಿಯಲ್ಲಿ ಉಭಯ ಸೇನೆಗಳ ನಡುವೆ ಸಂಘರ್ಷ ಮುಂದುವರೆಸಿದ್ದರೂ ಪ್ರಧಆನಿ ಮೋದಿಯವರು ಮೇ.5 ರಿಂದ ಈ ಬಗ್ಗೆ ತುಟಿಬಿಚ್ಚಿ ಮಾತನಾಡಿಲ್ಲ. ವಿದೇಶಿ ಸೈನಿಕರು ಒಂದು ದೇಶದ ಗಡಿ ದಾಟಿ ಬಂದಿದ್ದರೂ, ಯಾವುದೇ ರಾಷ್ಟ್ರದ ಮುಖ್ಯಸ್ಥರು ಇಷ್ಟು ದಿನ ಮೌನವಾಗಿರುವುದನ್ನು ನೋಡಿದ್ದೀರಾ? ಎಂದು ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ. 

ಈ ಬಗ್ಗೆ ರಕ್ಷಣಾ ಸಚಿವಾಲಯವಾಗಲೀ, ಸೇನಾ ಮುಖ್ಯ ಕಚೇರಿಯಾಗಲೀ ಅಧಿಕೃತವಾಗಿ ಹೇಳಿಕೆ ನೀಡುವುದನ್ನು ಇಡೀ ದೇಶ ಎದುರು ನೋಡುತ್ತಿದೆ. 

ಸಂಘರ್ಷದಲ್ಲಿ ಹಲವು ಭಾರತೀಯ ಯೋಧರು ಪ್ರಾಣತೆತ್ತಿದ್ದಾರೆ. ಇದರಲ್ಲಿ ತ್ಯಾಗ ಮಾಡಿದವರಾರು? ತಮಿಳುನಾಡಿನ ರಾಮನಾಥಪುರಂನ ಯೋಧರೊಬ್ಬರು ಹುತಾತ್ಮರಾಗಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com