ಶ್ರೀನಗರ: ಗಣರಾಜ್ಯೋತ್ಸವ ವೇಳೆ ದಾಳಿಗೆ ಸ್ಕೆಚ್: ಐವರು ಜೆಇಎಂ ಸಂಚುಕೋರರ ಬಂಧನ

ಗಣರಾಜೋತ್ಸವಕ್ಕೆ  ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಗಣರಾಜೋತ್ಸವಕ್ಕೆ  ಕೆಲ ದಿನಗಳು ಬಾಕಿ ಇರುವಂತೆಯೇ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ 
ಶ್ರೀನಗರದಲ್ಲಿ ಮಹತ್ವದ ಕಾರ್ಯಾಚರಣೆಯಲ್ಲಿ ಜೈಷ್-ಇ- ಮೊಹಮ್ಮದ್ ಸಂಘಟನೆಗೆ ಸೇರಿದ ಐವರು ಸಂಚುಕೋರರನ್ನು ಬಂಧಿಸಲಾಗಿದೆ.

ಗಣರಾಜ್ಯೋತ್ಸವ ದಿನಾಚರಣೆಗೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಹಜಾರತ್ ಬಾಲ್ ಪ್ರದೇಶದಲ್ಲಿ ಎರಡು ಗ್ರೆನೇಡ್ ಸ್ಫೋಟವಾಗಿದ್ದು, ಜೈಷ್ -ಇ- ಮೊಹಮ್ಮದ್  ಸಂಘಟನೆಯ ಸಂಚನ್ನು ಬೇಧಿಸುವಲ್ಲಿ ಶ್ರೀನಗರ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್  ಮಾಡಿದ್ದಾರೆ.

ಸಂಚುಕೋರರನ್ನು ಸದರ್ಬಲ್ ಹಜರತ್‌ಬಾಲ್‌ನ ಐಜಾಜ್ ಅಹ್ಮದ್ ಶೇಖ್,  ಹಜಾರತ್ ಬಾಲ್  ಅಸಾರ್ ಕಾಲೋನಿಯ ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್,  ಎಲ್ಲಹಿಬಾಗ್ ಸೌರಾದ ಶಹೀಲ್ ಫಾರೂಖ್ ಗೊಜ್ರಿ ಮತ್ತು ಸದರ್ ಬಲ್ ಹಜಾರತ್ ಬಾಲ್ ನ ನಸೀರ್ ಅಹ್ಮದ್ ಮೀರ್ ಎಂದು ಗುರುತಿಸಲಾಗಿದೆ. 

ಸಂಚುಕೋರರಿಂದ  143 ಗೆಲಾಟಿನ್ ಕಡ್ಡಿಗಳು, 7 ದ್ವಿತೀಯ ಸ್ಫೋಟಕಗಳು, 01 ಸೈಲೆನ್ಸರ್ಸ್, 42 ಡಿಟೊನೆಟರ್ಸ್, ವಾಕಿ ಟಾಕಿ, ಸಿಡಿ ಡ್ರೈವ್,  ಬ್ಯಾಟರಿಗಳು, ಬ್ಯಾಟರಿ ಚಾರ್ಜರ್, ಕಾಯಿಲ್, ಪೌಚ್, ಅಮೆರಿಕಾದ ಪ್ರವಾಸಿಗರು ಬಳಸುವ ರಾಕ್ ಸಾಕ್ ಬ್ಯಾಗ್,  ನ್ಯೂಟ್ರಿಕ್ ಆಸಿಡ್ ಬಾಟಲ್  ಸೇರಿದಂತೆ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com