ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಜನಂಸಂಖ್ಯಾ ನೋಂದಣಿ ವಿಚಾರವಾಗಿ ತಮಿಳುನಾಡಿನ ಮುಸ್ಲಿಂ ಮುಖಂಡರು ಇಂದು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನ ಭೇಟಿ ಚರ್ಚೆ ನಡೆಸಿದರು.
ಚೆನ್ನೈನಲ್ಲಿರುವ ರಜನಿಕಾಂತ್ ಅವರ ಮನೆಗೆ ಜಮಾತ್-ಉಲ್-ಉಲಾಮಾ ಸಬಾಯ್ ಸಂಘಟನೆಯ ನಿಯೋಗ ಆಗಮಿಸಿ ರಜಿನಿಕಾಂತ್ ಅವರನ್ನು ಭೇಟಿಯಾಗಿದೆ. ಈ ವೇಳೆ ಎನ್ಪಿಆರ್(national population register) ಕುರಿತು ಮನವಿಯನ್ನು ಸಲ್ಲಿಸಿದೆ.
ಭೇಟಿ ಬಳಿಕ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ.ಎಂ ಬಖಾವಿ, ನಮ್ಮ ನಿಯೋಗ ರಜಿನಿಕಾಂತ್ರನ್ನ ಭೇಟಿಯಾಗಿ, ಎನ್ಪಿಆರ್ಗೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನ ಚರ್ಚಿಸಲಾಯ್ತು. ಎನ್ಪಿಆರ್ನಿಂದ ಮುಸ್ಲಿಮರಿಗೆ ಆಗುವ ಸಮಸ್ಯೆಗಳ ಬಗ್ಗೆ ನಾವು ವಿವರಿಸಿದ್ದೇವೆ. ರಜಿನಿಕಾಂತ್ ಅವರು ನಮ್ಮ ವಾದವನ್ನ ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಮರಲ್ಲಿ ಆತಂಕ ನಿವಾರಿಸಲು ಅಗತ್ಯವಾದ ಕೆಲಸವನ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Advertisement