ಸಾಂದರ್ಭಿಕ ಚಿತ್ರ
ದೇಶ
ಭಾರತ ವಿರುದ್ಧದ ಪಾಕ್ ಗೆಲುವು ಸಂಭ್ರಮಾಚರಣೆ: ರಾಜಸ್ಥಾನ ಶಿಕ್ಷಕಿ ಕೆಲಸದಿಂದ ವಜಾ
ನಫೀಸಾ ಅವರ ವಾಟ್ಸಾಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಶಾಲಾ ಆಡಳಿತದ ಗಮನಕ್ಕೂ ಬಂದಿತ್ತು.
ಜೈಪುರ: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕ್ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಇದನ್ನೂ ಓದಿ: ಪಾಕ್ ಎದುರು ಭಾರತದ ಸೋಲು: ಪಾಕಿಸ್ತಾನ ಪ್ರಧಾನಿ ಅಪಹಾಸ್ಯ
ನಫೀಸಾ ಅಟಾರಿ ಎಂಬಾಕೆ ಅಮಾನತು ಶಿಕ್ಷೆಗೆ ಒಳಗಾದ ಶಿಕ್ಷಕಿ. ಉದಯ್ಪುರದ ನೀರಜಾ ಮೋದಿ ಖಾಸಗಿ ಶಾಲೆಯಲ್ಲಿ ಆಕೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಭಾನುವಾರ ನಡೆದ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಸೋತಿದ್ದು ಕೋಟ್ಯಂತರ ಭಾರತೀಯರಿಗೆ ತೀವ್ರ ಹತಾಶೆಯುಂಟುಮಾಡಿತ್ತು. ಆದರೆ ಆ ಸಮಯದಲ್ಲಿ ನಫೀಸಾ ಅವರು 'ಜೀತ್ ಗಯಿ, ನಾವು ಗೆದ್ದೆವು' ಎಂದು ವಾಟ್ಸಾಪ್ ಸಂದೇಶ ಹಾಕಿಕೊಂಡಿದ್ದರು.
ನಫೀಸಾ ಅವರ ವಾಟ್ಸಾಪ್ ಸ್ಟೇಟಸ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗಿ, ಶಾಲಾ ಆಡಳಿತದ ಗಮನಕ್ಕೂ ಬಂದಿತ್ತು. ಈ ಬಗ್ಗೆ ಸಭೆ ನಡೆಸಿದ ಆಡಳಿತ ಮಂಡಳಿ ಆಕೆಯನ್ನು ಕೆಲಸದಿಂದ ವಜಾ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ