ದೇಶದಲ್ಲಿ ಸದ್ದೇ ಇಲ್ಲದೆ ಕಣ್ಮರೆಯಾಗುತ್ತಿವೆ 'ಕತ್ತೆ'ಗಳು: ಸಂತತಿಯಲ್ಲಿ ಶೇ.61ರಷ್ಟು ಇಳಿಕೆ

ದೇಶದಲ್ಲಿ ಕತ್ತೆಗಳ ಸಂತತಿ ಗಣನೀಯವಾಗಿ ಕಣ್ಮರೆಯಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು ಅಧ್ಯಯನದ ಮೂಲಕ ತಿಳಿದುಬಂದಿದೆ.
ದೇಶದಲ್ಲಿ ಸದ್ದೇ ಇಲ್ಲದೆ ಕಣ್ಮರೆಯಾಗುತ್ತಿವೆ 'ಕತ್ತೆ'ಗಳು: ಸಂತತಿಯಲ್ಲಿ ಶೇ.61ರಷ್ಟು ಇಳಿಕೆ

ನವದೆಹಲಿ: ದೇಶದಲ್ಲಿ ಕತ್ತೆಗಳ ಸಂತತಿ ಗಣನೀಯವಾಗಿ ಕಣ್ಮರೆಯಾಗುತ್ತಿದೆ ಎಂಬ ಆಘಾತಕಾರಿ ಅಂಶವೊಂದು ಅಧ್ಯಯನದ ಮೂಲಕ ತಿಳಿದುಬಂದಿದೆ.

ಹೌದು.. ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದ ಕತ್ತೆಗಳು ಇಂದು ಗಣನೀಯವಾಗಿ ಕಣ್ಮರೆಯಾಗುತ್ತಿವೆ. ದೇಶದಲ್ಲಿ ಕತ್ತೆಗಳ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಕತ್ತೆಗಳ ಸಂಖ್ಯೆಯಲ್ಲಿ ಶೇ.61ರಷ್ಟು ಇಳಿಕೆ ಕಂಡುಬಂದಿದೆ ಎಂದು ಬ್ರಿಟನ್ ಮೂಲದ ಅಂತರಾಷ್ಟ್ರೀಯ ಎಕ್ವೈನ್ ಚಾರಿಟಿ ಬೋರ್ಕೆ ಇಂಡಿಯಾ ಸಂಸ್ಥೆ ನಡೆಸಿದ ತನಿಖಾ ಅಧ್ಯಯನದಿಂದ ತಿಳಿದುಬಂದಿದೆ.

ಶರತ್ ಕೆ ವರ್ಮಾ ನೇತೃತ್ವದ  ಬ್ರೂಕ್ ಇಂಡಿಯಾ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ದೇಶಾದ್ಯಂತ ಕತ್ತೆಗಳ ಜನಸಂಖ್ಯೆಯಲ್ಲಿ ಒಟ್ಟಾರೆ 61.23% ನಷ್ಟು ತೀವ್ರ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿರುವ ಶರತ್ ಕೆ ವರ್ಮಾ ಅವರು, '2012 ಮತ್ತು 2019 ರ ಜಾನುವಾರು ಗಣತಿಯಲ್ಲಿ ಭಾರತದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಒಟ್ಟಾರೆ 61.23% ರಷ್ಟು ಇಳಿಕೆ ದಾಖಲಾಗಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿ ಮಾತ್ರ ಕತ್ತೆಗಳನ್ನು ಕಡಿಯ(ವಧೆ)ಲಾಗುತ್ತದೆ ಎಂದು ನನಗೆ ತನಿಖೆಯ ಸಮಯದಲ್ಲಿ ತಿಳಿದುಬಂದಿತ್ತು. ಕೆಲವು ಅಕ್ರಮ ಸಾಗಣೆದಾರರು ಕತ್ತೆಗಳನ್ನು ಅಕ್ರಮವಾಗಿ ಮರೆಮಾಚಿ ಅವುಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡುವವರು ಅವುಗಳನ್ನು ಮರೆಮಾಚುತ್ತಿದ್ದರು. ಈಗಲೂ ಅಕ್ರಮ ಕತ್ತೆ ಮರೆಮಾಚುವ ವ್ಯಾಪಾರ (ಡಿಎಚ್‌ಟಿ) ಅಸ್ತಿತ್ವದಲ್ಲಿದೆ ಎಂದು ಅವರು ಹೇಳಿದರು.

2019ರ ಜಾನುವಾರು ಗಣತಿಯ ಅಂಕಿಅಂಶಗಳು ಕತ್ತೆಗಳ ಜನಸಂಖ್ಯೆಯಲ್ಲಿ ಶೇ 61% ಕುಸಿತ ದಾಖಲಾಗಿದೆ. ಹೀಗಾಗಿ ರಹಸ್ಯ ಕತ್ತೆ ವ್ಯಾಪಾರ (DHT) ಕೋನದ ಕಡೆಗೆ ಅನುಮಾನವನ್ನು ಹೆಚ್ಚಿಸಿದೆ. ಸುಮಾರು 0.32 ಮಿಲಿಯನ್ ಕತ್ತೆಗಳ ಜನಸಂಖ್ಯೆಯನ್ನು ಹೊಂದಿದ್ದ ಭಾರತದಲ್ಲಿ, 2019 ರ ಜಾನುವಾರು ಗಣತಿಯ ಪ್ರಕಾರ ಇದೀಗ ಕೇವಲ 0.12 ಮಿಲಿಯನ್‌ ಗೆ ಕುಸಿದಿದೆ. ಅಂದರೆ ಸುಮಾರು ಶೇ.61.23% ರಷ್ಟು ಕತ್ತೆಗಳ ಪ್ರಮಾಣ ಕುಸಿದಿದೆ.

BI ತಂಡವು ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ಬಿಹಾರ, ಉತ್ತರ ಪ್ರದೇಶ ಮತ್ತು ಗುಜರಾತ್‌ನ ಒಳಭಾಗಗಳಿಗೆ ಭೇಟಿ ನೀಡಿದ್ದು, ಕತ್ತೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತದ ವಿವರಗಳನ್ನು ವಿವರಿಸಲು ನಾವು ಅನೇಕ ಕತ್ತೆ ಮಾಲೀಕರು, ಪ್ರಾಣಿ ವ್ಯಾಪಾರಿಗಳು, ಜಾನುವಾರು ಮೇಳಗಳ ಸಂಘಟಕರು ಮತ್ತು ರಾಜ್ಯ ಮತ್ತು ಕೇಂದ್ರ ಪಶುಸಂಗೋಪನಾ ಅಧಿಕಾರಿಗಳ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ ಎಂದು ಶರ್ಮಾ ಅವರು ಹೇಳಿದರು.

ಕತ್ತೆಯ ಅಂಗಾಂಗಳಿಗೆ ಬಹುಬೇಡಿಕೆ
ಇನ್ನು ಕತ್ತೆಯ ಅಂಗಾಂಗಳಿಗೆ ಬ್ಲಾಕ್ ಮಾರ್ಕೆಟ್ ನಲ್ಲಿ ಬಹುಬೇಡಿಕೆ ಇದ್ದು, ಕತ್ತೆಯ ಚರ್ಮವನ್ನು ಇತರ ಹಲವು ದೇಶಗಳಿಗೆ ಕಳ್ಳಸಾಗಣೆ ಮಾಡಲಾಗುತ್ತದೆ, ವಿಶೇಷವಾಗಿ ಚೀನಾಕ್ಕೆ ಕೆಲವು ಔಷಧಿಗಳನ್ನು ತಯಾರಿಸಲು ಬಳಸುತ್ತಿದ್ದ ಎಜಿಯಾವೊಗಾಗಿ ರವಾನಿಸಲಾಗುತ್ತದೆ ಎಂದು ವರ್ಮಾ ಹೇಳಿದ್ದಾರೆ. 'ಚೀನಾದ ಸಾಂಪ್ರದಾಯಿಕ ಔಷಧವಾದ ‘ಎಜಿಯಾವೊ’ ತಯಾರಿಸಲು ಕತ್ತೆ ಚರ್ಮವನ್ನು (ಚರ್ಮ) ಬಳಸುವುದರಿಂದ ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕತ್ತೆಗಳ ಜನಸಂಖ್ಯೆಯ ಕುಸಿತಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಚೀನಾ ಹೊಣೆಯಾಗಿದೆ. ಆರೋಗ್ಯದ ಒಲವಿನಂತೆ ಎಜಿಯಾವೋ ಇತರ ಅನಾರೋಗ್ಯವನ್ನು ಗುಣಪಡಿಸಲು ಬಳಸುವುದರ ಜೊತೆಗೆ ಜೀವನ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ ಇದು ಕತ್ತೆಗಳ ಚರ್ಮದ ಬೇಡಿಕೆ ಹೆಚ್ಚಲು ಕಾರಣ ಎಂದು ಅವರು ಹೇಳಿದರು. 

ಯಾವ ರಾಜ್ಯದಲ್ಲಿ ಎಷ್ಟೆಷ್ಟು?
ಶರತ್ ಕೆ ವರ್ಮಾ ಅವರು ಸಿದ್ಧಪಡಿಸಿದ ಬಿಐ ಅಧ್ಯಯನ ವರದಿಯ ಪ್ರಕಾರ, 2012 ಮತ್ತು 2019 ರ ನಡುವೆ ಮಹಾರಾಷ್ಟ್ರವು ತನ್ನ ಕತ್ತೆಗಳ ಜನಸಂಖ್ಯೆಯಲ್ಲಿ ಶೇ.39.69% ರಷ್ಟು ಇಳಿಕೆ ದಾಖಲಿಸಿದ್ದು, ಆಂಧ್ರಪ್ರದೇಶವು ಕತ್ತೆಗಳ ಸಂಖ್ಯೆಯಲ್ಲಿ 53.22% ಕುಸಿತ ದಾಖಲಾಗಿದೆ. ಗುಜರಾತ್ ನಲ್ಲಿ ಶೇ.70.94% ರಷ್ಟು, ಬಿಹಾರದಲ್ಲಿ ಶೇ.47.31% ರಷ್ಟು, ರಾಜಸ್ಥಾನದಲ್ಲಿ ಶೇ.71.31% ರಷ್ಟು ಮತ್ತು ಉತ್ತರ ಪ್ರದೇಶದಲ್ಲಿ ಶೇ.71.72%ರಷ್ಟು ಕತ್ತೆಗಳ ಪ್ರಮಾಣ ಕುಸಿತವಾಗಿದೆ.

ಕತ್ತೆ ಸಂತತಿ ಕುಸಿತಕ್ಕೆ ಕಾರಣ
ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕತ್ತೆಗಳನ್ನು ಆಕರ್ಷಿಸುವ ಪ್ರಸಿದ್ಧ ಜೆಜುರಿ ಜಾತ್ರೆಗೆ ಹೋದಾಗ ಅವರು ಈ ಬಗ್ಗೆ ಮಾಹಿತಿ ಪಡೆದಿದ್ದು, ಸ್ಥಳೀಯ ವ್ಯಾಪಾರಸ್ಥರಿಂದ ಜಾತ್ರೆಯಲ್ಲಿ ಕತ್ತೆಗಳನ್ನು ತಿರುಗಿಸುವ ಪದ್ಧತಿ ಕೂಡ ಈಗ ಕ್ಷೀಣಿಸುತ್ತಿದೆ ಎಂದು ಹೇಳಿದ್ದಾರೆ.  ಸ್ಥಳೀಯ ಕತ್ತೆ ವ್ಯಾಪಾರಿ ರಾಮ್ ಬಾಬು ಜಾಧವ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ವರ್ಮಾ ಅವರು, 'ತಿಂಗಳಿಗೆ 200 ಕತ್ತೆಗಳನ್ನು ಖರೀದಿಸಲು ಜಾಧವ್ ಅವರನ್ನು ಚೀನಾದ ವ್ಯಕ್ತಿಯೊಬ್ಬರು ಒಂದೆರಡು ವರ್ಷಗಳ ಹಿಂದೆ ಸಂಪರ್ಕಿಸಿದ್ದರು. ಮಹಾರಾಷ್ಟ್ರದ ಸ್ಥಳೀಯ ವ್ಯಕ್ತಿಯ ಮೂಲಕ ಜಾಧವ್ ಅವರನ್ನು ಸಂಪರ್ಕಿಸಿದ್ದ ಚೀನಾದ ವ್ಯಕ್ತಿ, ಕತ್ತೆಗಳ ಚರ್ಮ ಮಾತ್ರ ಬೇಕು ಎಂದು ಕೇಳಿದ್ದ ಎಂದು ಹೇಳಿದ್ದಾರೆ.  

ಇತ್ತ ಆಂಧ್ರಪ್ರದೇಶದಲ್ಲಿ ಏಲೂರು, ಗುಡಿವಾಡ, ಮಚಲಿಪಟ್ಟಣ, ಬಾಪಟ್ಲ, ಚೆರುಕುಪಲ್ಲಿ, ಮಂಗಳಗಿರಿ, ಗುಂಟೂರು ಮತ್ತು ಚಿರಾಲ್ ಪ್ರದೇಶಗಳಲ್ಲಿ ಕತ್ತೆಗಳ ಹತ್ಯೆ ನಡೆಯುತ್ತಿದೆ. ರಾಜಸ್ಥಾನದಲ್ಲಿ ಅತಿದೊಡ್ಡ ಕತ್ತೆಗಳ ಮೇಳವನ್ನು ನಡೆಸಲಾಗುತ್ತದೆ. ಜೀವಂತ ಕತ್ತೆಗಳ ಅಕ್ರಮ ರಫ್ತು, ಅವುಗಳ ಚರ್ಮ ಮತ್ತು ಮಾಂಸವನ್ನು ಸುಲಭವಾಗಿ ಅಕ್ರಮ ಸಾಗಣೆ ಮಾಡಬಹುದಾದ ಮಾರ್ಗಗಳ ಮೂಲಕ ಗಡಿಯುದ್ದಕ್ಕೂ ಈ ಕತ್ತೆಗಳ ಮಾರಾಟ ನಡೆಯುತ್ತಿದೆ. ಇದೂ ಕೂಡ ಕತ್ತೆಗಳ ಪ್ರಮಾಣ ಕುಸಿಯಲು ಕಾರಣ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಸಮುದಾಯ ವಲಸೆ
ವರದಿಯಲ್ಲಿ ಉಲ್ಲೇಖಿಸಲಾದ ಕತ್ತೆಗಳ ಪ್ರಮಾಣ ಇಳಿಮುಖವಾಗಲು ಇತರೆ ಕಾರಣಗಳೆಂದರೆ ಕಡಿಮೆ ಉಪಯುಕ್ತತೆ, ಕತ್ತೆಗಳ ಮೇಲೆ ಆಧಾರಿತವಾಗಿದ್ದ ಸಮುದಾಯಗಳು ಈಗ ಉದ್ಯೋಗ ಅಥವಾ ವ್ಯಾಪಾರವನ್ನು ಆರಿಸಿಕೊಳ್ಳುತ್ತಿವೆ. ಯಾಂತ್ರೀಕೃತಗೊಂಡ ಮತ್ತು ಯಾಂತ್ರೀಕರಣಗಳು ಮತ್ತು ಕಳ್ಳತನಗಳು ಸಹ ಕತ್ತೆಗಳ ಪ್ರಮಾಣ ಕುಸಿಯಲು ಕಾರಣ. ಈಗ್ಗೆ ಅಕ್ರಮವಾಗಿ ಕತ್ತೆಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದವರನ್ನು ತಡೆದಿದ್ದ ಆಂಧ್ರಪ್ರದೇಶ ಪೊಲೀಸರು 39 ಕತ್ತೆಗಳನ್ನು ರಕ್ಷಿಸಿದ್ದರು. ಅಂತೆಯೇ ಕಳ್ಳಸಾಗಣೆದಾರರನ್ನು ಬಂಧಿಸಿದ್ದರು ಎಂದು ವರ್ಮಾ ಹೇಳಿದ್ದಾರೆ.

ಇನ್ನು ಕತ್ತೆಗಳ ಕಳ್ಳ ಸಾಗಣೆ ತಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕಾಗಿ ಭಾರತ ಸರ್ಕಾರದ ಪಶುಸಂಗೋಪನಾ ಇಲಾಖೆಯೊಂದಿಗೆ ತಮ್ಮ ತನಿಖಾ ಅಧ್ಯಯನ ವರದಿಯನ್ನು ಹಂಚಿಕೊಳ್ಳಲಾಗಿದೆ ಎಂದು ವರ್ಮಾ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com