ನೀನು ಕುಡಿದರೆ ನೀನೇ ಸಾಯುತ್ತೀಯಾ: ನಕಲಿ ಮದ್ಯ ದುರಂತಕ್ಕೆ ಬಿಹಾರ ಸಿಎಂ ಬೇಸರ

ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತಪಟ್ಟ ದುರಂತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, "ನೀನು ನಕಲಿ ಮದ್ಯ ಸೇವಿಸಿದರೆ ನೀನೇ ಸಾಯುತ್ತೀಯಾ" ಎಂದು ಹೇಳಿದ್ದಾರೆ.
ನಿತೀಶ್ ಕುಮಾ
ನಿತೀಶ್ ಕುಮಾ

ಓಟ್ನಾ: ಬಿಹಾರದ ಛಾಪ್ರಾದಲ್ಲಿ ನಕಲಿ ಮದ್ಯ ಸೇವಿಸಿ 39 ಮಂದಿ ಮೃತಪಟ್ಟ ದುರಂತದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, "ನೀನು ನಕಲಿ ಮದ್ಯ ಸೇವಿಸಿದರೆ ನೀನೇ ಸಾಯುತ್ತೀಯಾ" ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಮದ್ಯ ನಿಷೇಧವನ್ನು ಸಮರ್ಥಿಸಿಕೊಂಡ ನಿತೀಶ್ ಕುಮಾರ್, ರಾಜ್ಯದಲ್ಲಿ ಮದ್ಯ ನಿಷೇಧ ನೀತಿಯಿಂದ ಹಲವು ಜನರಿಗೆ ಪ್ರಯೋಜನವಾಗಿದೆ. ತಮ್ಮ ಕ್ರಮದಿಂದ ಹೆಚ್ಚು ಜನ ಮದ್ಯಪಾನವನ್ನು ತ್ಯಜಿಸಿದ್ದಾರೆ ಎಂದು ಹೇಳಿದರು.

"ಮದ್ಯ ನಿಷೇಧದಿಂದ ಹಲವಾರು ಜನರಿಗೆ ಲಾಭವಾಗಿದೆ. ಹೆಚ್ಚಿನ ಸಂಖ್ಯೆಯ ಜನರು ಮದ್ಯವನ್ನು ತ್ಯಜಿಸಿದ್ದಾರೆ... ಇದು ಒಳ್ಳೆಯದು. ಹಲವಾರು ಜನ ಇದನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ತೊಂದರೆ ಕೊಡುತ್ತಿದ್ದಾರೆ. ಅಂತವರನ್ನು ಗುರುತಿಸಿ ಬಂಧಿಸುವಂತೆ ನಾನು ಅಧಿಕಾರಿಗಳಿಗೆ ಹೇಳಿದ್ದೇನೆ" ಎಂದು ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

"ಮದ್ಯೆ ಸೇವಿಸುವ ಬಡವರನ್ನು ಬಂಧಿಸಬೇಡಿ ಎಂದು ನಾನು ಅಧಿಕಾರಿಗಳಿಗೆ ಹೇಳಿದ್ದೇನೆ. ಆದರೆ ಮದ್ಯವನ್ನು ತಯಾರಿಸುವ ಮತ್ತು ಮದ್ಯದ ವ್ಯಾಪಾರವನ್ನು ನಡೆಸುವ ಜನರನ್ನು ಬಂಧಿಸಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com