ಐದೇ ದಿನಕ್ಕೆ ಕಿತ್ತು  ಬಂತು  ಪ್ರಧಾನಿ ಮೋದಿ ಉದ್ಘಾಟಿಸಿದ್ದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ರಸ್ತೆ!

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ರಸ್ತೆ ಉದ್ಘಾಟನೆಯಾದ ಐದೇ ದಿನದಲ್ಲಿ ಕಿತ್ತುಬಂದಿದ್ದು, ಕಾಮಗಾರಿ ಗುಣಮಟ್ಟ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಿತ್ತುಬಂದಿರುವ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ
ಕಿತ್ತುಬಂದಿರುವ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ
Updated on

ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ರಸ್ತೆ ಉದ್ಘಾಟನೆಯಾದ ಐದೇ ದಿನದಲ್ಲಿ ಕಿತ್ತುಬಂದಿದ್ದು, ಕಾಮಗಾರಿ ಗುಣಮಟ್ಟ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಹೌದು.. ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಉತ್ತರ ಪ್ರದೇಶದ ಹೊಚ್ಚಹೊಸ ಎಕ್ಸ್ ಪ್ರೆಸ್ ವೇ ಹಾಳಾಗಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಎಕ್ಸ್ ಪ್ರೆಸ್ ವೇ ರಸ್ತೆ ಕಿತ್ತು ಬಂದಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಮಗಾರಿ ಗುಣಮಟ್ಟದ ಕುರಿತು ವ್ಯಾಪಕ ಟೀಕೆಗಳು ಹರಿದಾಡುತ್ತಿವೆ.

ಇದೇ ವಿಚಾರವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷಗಳಿಗೆ ಎಡೆ ಮಾಡಿಕೊಟ್ಟಿದ್ದು, ಸ್ವತಃ ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮದೇ ಪಕ್ಷದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುತ್ತಿದ್ದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸಿದ್ದಾರೆ. '15,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಎಕ್ಸ್ ಪ್ರೆಸ್‌ವೇ ಐದು ದಿನಗಳ ಮಳೆಯನ್ನು ಸಹ ತಡೆದುಕೊಳ್ಳಲು ಸಾಧ್ಯವಾಗದಿದ್ದರೆ, ಅದರ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸುತ್ತವೆ' ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

296-ಕಿಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇಯ ಭಾಗಗಳು ಜಲೌನ್ ಜಿಲ್ಲೆಯ ಬಳಿಯಿರುವ ಛಿರಿಯಾ ಸಲೆಂಪುರ್‌ನಲ್ಲಿ ಕುಸಿದಿವೆ ಮತ್ತು ಗುರುವಾರ ಭಾರೀ ಮಳೆಯ ನಂತರ ಹೆದ್ದಾರಿಯಲ್ಲಿ ಆಳವಾದ ಗುಂಡಿಗಳು ಬಿದ್ದಿವೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ವರುಣ್ ಗಾಂಧಿ ಆಗ್ರಹಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಎಕ್ಸ್ ಪ್ರೆಸ್‌ವೇ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದು, ಇದು “ಬಿಜೆಪಿಯ ಅರೆಮನಸ್ಸಿನ ಅಭಿವೃದ್ಧಿಯ ಗುಣಮಟ್ಟದ ಮಾದರಿ” ಎಂದು ಕುಟುಕಿದ್ದಾರೆ. “ಬುಂದೇಲ್‌ಖಂಡ್ ಎಕ್ಸ್ ಪ್ರೆಸ್‌ವೇ ಅನ್ನು ದೊಡ್ಡ ಜನರು ಉದ್ಘಾಟಿಸಿದರು ಮತ್ತು ಒಂದು ವಾರದಲ್ಲಿ, ಅದರಲ್ಲಿ ದೊಡ್ಡ ಭ್ರಷ್ಟಾಚಾರದ ಹೊಂಡ ಹೊರಬಿತ್ತು” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್ ಕೂಡ ಟ್ವಿಟ್ಟರ್‌ನಲ್ಲಿ ಬಿಜೆಪಿ ಸರ್ಕಾರವನ್ನು ಗುರಿಯಾಗಿಸಿದ್ದು, ಉತ್ತರ ಪ್ರದೇಶವನ್ನು “ಗುಂಡಿ ಮುಕ್ತ” ಭರವಸೆ ನೀಡಿದವರು ನಿರ್ಮಿಸಿದ ಹೊಸ ಎಕ್ಸ್ ಪ್ರೆಸ್‌ವೇ “ಗುಂಡಿಗಳಿಂದ ಕೂಡಿದೆ” ಎಂದು ಹೇಳಿದೆ. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಗೊಂಡ ನಾಲ್ಕು ದಿನಗಳ ನಂತರ ಅಭಿವೃದ್ಧಿಗೆ ಹೊಡೆತ ಬಿದ್ದಿದೆ ಎಂದು ಹೇಳಿದೆ.

ಜುಲೈ 16 ರಂದು ಪ್ರಧಾನಿ ಮೋದಿ ಅವರು ಎಕ್ಸ್ ಪ್ರೆಸ್‌ವೇಯನ್ನು ಉದ್ಘಾಟಿಸಿದ್ದರು. ನಾಲ್ಕು-ಲೇನ್ ಎಕ್ಸ್ ಪ್ರೆಸ್‌ವೇ ಚಿತ್ರಕೂಟದಲ್ಲಿರುವ ಭಾರತ್‌ಕೂಪ್ ಅನ್ನು ಇಟಾವಾದಲ್ಲಿನ ಕುದುರೆಲ್‌ನೊಂದಿಗೆ ಸಂಪರ್ಕಿಸುತ್ತದೆ, ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com