ಯಕೃತ್ ಸೋಂಕು: ಎನ್ಇಇಟಿ ಆಕಾಂಕ್ಷಿ ನಿಧನ, 35 ವಿದ್ಯಾರ್ಥಿಗಳಿಗೆ ಅನಾರೋಗ್ಯ, ಕಲುಷಿತ ನೀರು ಕಾರಣ?

ಯಕೃತ್ ಸೋಂಕಿನಿಂದಾಗಿ 18 ವರ್ಷದ ಎನ್ಇಇಟಿ ಆಕಾಂಕ್ಷಿಯೊಬ್ಬರು ನಿಧನರಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. 
ವಿದ್ಯುತ್ ಸ್ಪರ್ಶದಿಂದ ಸಾವು
ವಿದ್ಯುತ್ ಸ್ಪರ್ಶದಿಂದ ಸಾವು
Updated on

ಕೋಟಾ: ಯಕೃತ್ ಸೋಂಕಿನಿಂದಾಗಿ 18 ವರ್ಷದ ಎನ್ಇಇಟಿ ಆಕಾಂಕ್ಷಿಯೊಬ್ಬರು ನಿಧನರಾಗಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ ನಡೆದಿದೆ. ವೈಭವ್ ರಾಯ್ ನಿಧನರಾಗಿರುವ ವಿದ್ಯಾರ್ಥಿಯಾಗಿದ್ದು, 36 ವಿದ್ಯಾರ್ಥಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಅನಾರಗ್ಯಕ್ಕೀಡಾಗಿದ್ದಾರೆ. 

ಈ ಘಟನೆ ಜವಾಹರ್ ನಗರದಲ್ಲಿ ವರದಿಯಾಗಿದ್ದು, 18 ವಿದ್ಯಾರ್ಥಿಗಳು ಈ ವರೆಗೂ ಚೇತರಿಸಿಕೊಂಡಿದ್ದರೆ, ಇನ್ನೂ ಮೂವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಕೋಟಾದ ಸಿಎಂಹೆಚ್ಒ ಡಾ. ಜಗದೀಷ್ ಸೋನಿ ಪಿಟಿಐ ಗೆ ಹೇಳಿಕೆ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಚಿಂಗ್ ಸಂಸ್ಥೆಗಳು, ಹೋಟೆಲ್ ಗಳು, ಕ್ಯಾಂಟೀನ್ ಗಳಿಗೆ ನೀರು ಪೂರೈಸುತ್ತಿರುವ 3 ನೀರು ಪೂರೈಕೆ ವ್ಯವಸ್ಥೆಯಿಂದ ಕಲುಷಿತ ನೀರು ಪೂರೈಕೆಯಾಗುತ್ತಿರುವುದೇ ಈ ಘಟನೆಗೆ ಕಾರಣವಿರಬಹುದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com